ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday 17 September 2012

ಪ್ರೇಮ ಪಥದಲ್ಲಿ ಸಾಧನೆಯ ಬೆಳಕು...


ಮೋಹಮತಿ ಕಥಾಮುಖಿ//ರಘುನಂದನ ಕೆ.

ಬಿಹಾರದ ಗಯಾ ಜಿಲ್ಲೆಯ ಕಲ್ಲುಗುಡ್ಡದ ತಪ್ಪಲಲ್ಲಿ ಒಂದು ಪುಟ್ಟ ಊರುಊರೆಂದಮೇಲೆ ಅದಕ್ಕೊಂದು ಹೆಸರುಊರ ಎದುರು ಕಾದ ಬಂಡೆಗಳ ಗುಡ್ಡಗುಡ್ಡದ ಬುಡದಲ್ಲೊಂದು ಗುಡಿಸಲಂತ ಮನೆ

1960 ಕಾಲ ಅದುಬದುಕಿಗೆ ಪ್ರೀತಿ ಇದ್ದರೆ ಸಾಕುಹಣವಿಲ್ಲದೆಯೂ ನಡೆದೀತು ಎಂದು ನಂಬಿ ಬದುಕುತ್ತಿದ್ದ ಜನರ ಕಾಲಅಲ್ಲೊಂದು ಗಂಡು ಹೆಣ್ಣುದಾಂಪತ್ಯದ ಸೊಬಗುಪ್ರೀತಿಯನ್ನೇ ಉಸಿರಾಗಿಸಿಕೊಂಡು ಒಲವ ಬೆಸುಗೆಯಲ್ಲಿ ಜೀವನ ನಡೆಸುತ್ತಿದ್ದ ಜೀವಗಳುಕೈ ತುತ್ತು ಊಟದ ಖುಷಿಯಲ್ಲಿಒಂದಷ್ಟು ದಿನ ಗಂಜಿಯಲ್ಲಿಒಂದಿಷ್ಟು ದಿನ ಖಾಲಿ ಹೊಟ್ಟೆಯಲ್ಲಿ ಉಸಿರಾಡುತ್ತಿದ್ದ ಗಂಡ ಹೆಂಡಿರ ತಂಪು ಗುಡಿಸಲದು

ಅಲ್ಲಿ ಪ್ರೀತಿ ಬಿಟ್ಟು ಯಥೇಚ್ಛವಾಗಿ ಸಿಗುತ್ತಿದ್ದ ಮತ್ತೊಂದೇನಾದರೂ ಇದ್ದರೆ ಅದು ಬಿಸಿಲು ಮಾತ್ರಅಂಥ ಊರಲ್ಲಿ ನೀರೆಂದರೆ ಹೊಳೆದಂತೆ ತಾರೆತಾರೆ-ಚುಕ್ಕೆಗಳಾದರೂ ದಿನ ರಾತ್ರಿಯೂ ಬಂದಾವುನೀರು ಮಾತ್ರ ಸಿಕ್ಕಷ್ಟುಮೊಗೆದಷ್ಟುಇಲ್ಲಿ ಜೀವ ಜಲ ಬೇಕಿದ್ದರೆ ಜೀವದ ಹಂಗು ತೊರೆದು ಕಾದ ಬಂಡೆಗಳ ಗುಡ್ಡವೇರಿ ಅದರಾಚೆಗಿನ ಪುಟ್ಟ ಕೊಳದಿಂದ ಹೊತ್ತು ತರಬೇಕು.

ಚಂದ್ರನಿಲ್ಲದ ರಾತ್ರಿ...
ತಾರೆಗಳೆಲ್ಲ ಮಿನುಗುತ್ತಿದ್ದ ಹೊಳೆ ಹೊಳೆವ ರಾತ್ರಿ
ಮುಚ್ಚಿದ ಕಣ್ಣೊಳಗೆ ಚಲಿಸುವ ಚಿತ್ರಗಳ ಸಂತೆ
ಭವಿಷ್ಯತ್ ಘಟನೆಗಳೆಲ್ಲ ಮನದ ಮೂಲೆಯಲ್ಲಿ...
ಅರೆ ಎಚ್ಚರದಲ್ಲಿ ಚಲಿಸುತ್ತಿರುವ ಅಸ್ಪಷ್ಟ ಕನಸು
ಕಣ್ಮುಚ್ಚಿದಾಗ ಕಾಡುತ್ತವೆತೆರೆದರೆ ಮಾಯ

ಕಾಲ ಸಂಚು ಹೂಡಿ ಅರಳಿದ್ದ ನಸುಕೊಂದರಲ್ಲಿ ನೀರ ತರಲು ಹೊರಟಿದ್ದು ಅವಳುಅವನ ಮನದ ಒಡತಿಗುಡ್ಡದಾಚೆಯ ನೀರ ತೀರವ ಸೇರಿ ತುಂಬಿದ ಭಾರದೊಂದಿಗೆ ತುಳಿದ ಹಾದಿಗುಡ್ಡ ಇಳಿವಾಗ ಜಾರಿದ್ದು ಕಾಲೊಂದೇ ಅಲ್ಲಬದುಕು ಕೂಡಚೆಲ್ಲಿದ ನೀರು ನೆಲ ತಾಗುವ ಮೊದಲೇ ಇಂಗಿತ್ತುಹರಿದ ರಕ್ತಕ್ಕೆ ಕರುಣೆಯಿಲ್ಲ

ಗಂಡ ಈತಮದುವೆಯಾಗಿ ವರ್ಷಗಳೆಷ್ಟೋ ಕಳೆದು ಹೊಂದಿ ಬೆಸೆದ ಜೀವ ಭಾವನೀರ ತರುವೆನೆಂದು ಹೋದ ಮಡದಿ ಇನ್ನೂ ಬರಲಿಲ್ಲವದ್ಯಾಕೆಂದು ಹೊರಟಿದ್ದು ಹುಡುಕಿಗುಡ್ಡದ ಪದತಲದಲ್ಲಿ ಕೆಂಪು ಚಿತ್ತಾರಗಳ ಮೈ ತುಂಬ ಹೊದ್ದು ಪ್ರಜ್ಞೆ ತಪ್ಪಿ ಬಿದ್ದ ಹೆಂಡತಿಯ ಕಂಡು ಎದೆಯೊಡೆದು ಅತ್ತಒಡೆದ ಬಿಂದಿಗೆಮುರಿದ ಬದುಕುಗಂಡ ಹೆಂಡಿರಿಬ್ಬರೂ ಬಡಿದಾಡಿದ್ದು ಯಮನೊಡನೆ ಎರಡು ದಿನಇವ ಪುರಾಣ ಪುರುಷನಲ್ಲನಮ್ಮ ನಿಮ್ಮಂತೆ ಬದುಕಿದವಪ್ರೀತಿ ಎಂಬ ದೇವರ ನಂಬಿ ಬಾಳಿದವ

ಕೊನೆಗೂ ಗೆದ್ದದ್ದು ಸಾವುಬದುಕಿಗೊಂದು ಕೊನೆದೇಹ ಹೋದದ್ದುಭಾವವಲ್ಲಪ್ರೀತಿಯಲ್ಲಆತ ಇದ ಅರಿಯಲಿಲ್ಲಕುಸಿದ ಕುದಿದಸತ್ತದ್ದು ಹೆಂಡತಿಸಮಾಧಿಯಾದದ್ದು ಆತಕಾಲ ಸವೆಯಿತುಗಡ್ಡ ಬೆಳೆಯಿತುನೀರಿಲ್ಲದೂರಲ್ಲಿ ಕಣ್ಣೀರಿಗೆ ಬರವಿಲ್ಲಸುರಿಸುರಿದು ಹರಿಯಿತುಉರಿವ ಸೂರ್ಯನಿಗೆ ಇಂಗದ ದಾಹಹರಿದ ಕಣ್ಣೀರ ಕಲೆ ಉಳಿದದ್ದುಗುಡ್ಡ ಅಚಲ.
ದಿಗ್ಗನೆದ್ದಕಣ್ಣು ತೆರೆದು ಎಚ್ಚರ
ಕಂಡದ್ದು ಕನಸುಅರೆ ತಿಳಿದ ಎಚ್ಚರಕ್ಕೆ ನಂಬಿಕೆ ಕಷ್ಟ
ಪಕ್ಕದಲ್ಲಿದ್ದ ಹೆಂಡತಿಗೆ ನವಿರು ನಿದ್ದೆ
ಕೊಂಚ ಕೊಂಚ ಕಾಲ ಸ್ಪಷ್ಟಅರಿವು ಬಾಹ್ಯಕ್ಕೆ

ತನ್ನ ಮನದೊಡತಿಪ್ರೇಮ ಕನಸಲ್ಲಿ ಮುರಿದಿದ್ದುಬದುಕಲ್ಲಿ ಅಲ್ಲಬದುಕಲ್ಲಿ ಮುಗಿಯಬಾರದೆಂದೇನೂ ಇಲ್ಲಅರೆ ತೆರೆದ ಅರಿವು ಸ್ಪಷ್ಟವಾಗುವ ಮೊದಲೇ ಮರೆವಿನ ಹೊದಿಕೆಒಂದಷ್ಟು ದಿನ ಕಳೆಯಿತುನೀರ ತರಲು ಎಂದಿನಂತೆ ಹೊರಟ ಹೆಂಡತಿ ಗುಡ್ಡದಿಂದ ಜಾರಿ ಬಿದ್ದ ದಿನವೊಂದು ಕಾದಿತ್ತುಹೋಗಬಹುದಾಗಿದ್ದ ಪ್ರಾಣ ಉಳಿಯಿತುಕಾಲು ಉಳುಕಿತು

ಎಂದೋ ಬಿದ್ದ ಕನಸಿಗೆ ಮತ್ತೆ ಎಚ್ಚರದ ರೂಪಕಾಲ ಕಳೆದಂತೆ ಅವನ ಮನಸ್ಸು ವಿಚಾರದ ಕುಲುಮೆಸ್ವಪ್ನ ಲೋಕದಲ್ಲಿ ಎಂದೋ ಮುರಿದು ಹೋದ ಜೀವದ ಪ್ರೇಮ ಭಾವ ಇನ್ನೂ ಕಾದಿತ್ತುಕಾದಿದ್ದು ಕಾಡಿತುಒಂದು ದಿನ ಅವನೆದೆಯಲ್ಲಿ ನಿಚ್ಚಳ ಬೆಳಕುಸ್ವಪ್ನದಾಚೆಗೂ ಎಚ್ಚರದ ಮಡಿಲಿಗೂ ಪ್ರೇಮ ಸೋಕಿತು

ಪ್ರೇಮ ತಾಕಿದಾಗ ಆನಂದವೇ ಹುಟ್ಟಬೇಕಿಲ್ಲಹುಟ್ಟಿದ್ದು ಬೇಗುದಿಹಠತನ್ನ ಒಲವ ಎಂದಾದರೂ ನಿರ್ಧಯವಾಗಿ ತನ್ನ ಪದತಲದಲ್ಲಿ ಕೊಂದು ಕೆಡವಬಹುದಾದ ಗುಡ್ಡದ ತಲೆ ಕತ್ತರಿಸುವ ಹಠಕಾದ ಕಲ್ಲುಗಳ ಚೂರಾಗಿಸಿ ನಾಟ್ಯವಾಡುವ ರುದ್ರ ಛಲ

ಕನಸು ಎಚ್ಚರದೊಳಗೆ ಸೇರಿದಾಗ ಅಚ್ಚರಿ ಸಂಭಾವ್ಯ
ಕನಸೆಂದು ಕಳೆದವರೇ ಹೆಚ್ಚು
ಉಳಿಸಿಕೊಂಡವರು ಸಾಧಕರಾದಾರು
ಸಾಧನೆಗೆ ಅರಿವಿತ್ತುಇವನೊಂದಿಗೆ ತನ್ನ ಪಥವಿದೆ
ಕನಸು ಹಗಲಿರುಳೂ ಕಾಡಿತುಕೆಣಕಿತು.

 ಮಡದಿಯ ಪ್ರೇಮ ಕಣ್ಣೆದುರು ಸುಳಿದಾಗಲೆಲ್ಲಾ ಅರಿವು ನಿಚ್ಚಳವಾಯಿತುಕೊನೆಗೂ ಆತ ನಿರ್ಧರಿಸಿದಒಂದು ಉಳಿಮತ್ತೊಂದು ಸುತ್ತಿಗೆಹೆಗಲಿಗೆ ಹಗ್ಗದ ಸುರಳಿಎದುರಿಗೆ ಎದೆಯುಬ್ಬಿಸಿ ಎತ್ತರ ನಿಂತು ಸವಾಲೆಸೆವ ಕಲ್ಲು ಬಂಡೆಗಳ ಗುಡ್ಡಅದರೆದುರು ಮೂರಡಿಯ ಗಡ್ಡ ಬಿಟ್ಟು ನಿಂತ ಈತ

1962 ಒಂದು ಸುದಿನಅಂದಿನಿಂದ ಶುರುವಾದದ್ದು ಹೋರಾಟದ ಆಟಸಾಧನೆಗೆ ಅವನ ಶಿರವೇರಬೇಕಿತ್ತುಕಾಲ ಹೂಡಿದ ಆಟಗುಡ್ಡದ ಶಿರವುರಳಲುಸಾಧನೆಯ ಗರಿ ಮೂಡಲುಹರಿದ ನೆತ್ತರು ಸಂಗಾತಿಯದುಕುದಿವ ನೆತ್ತರು ಇವನದುಕಲ್ಲು ಬಂಡೆ ಸುಟ್ಟಿದ್ದು ಪಾದಗಳಸೂರ್ಯ ಸುಟ್ಟಿದ್ದು ತಲೆಯನ್ನ. 

ಜಗವ ಬೆಳಗುವ ದೇವ ಸೂರ್ಯ
ತಲೆಯೊಳಗೆ ಸುಡಬೇಕಿತ್ತು ಸುಡುಗಾಡುಗಳ
ಬೆಳಕ ಕಾವು ಕತ್ತಲೆಯ ಕೂಡಬೇಕಿತ್ತು
ಸೂರ್ಯ ಹುಟ್ಟುವ ಮೊದಲೇ ಕಲ್ಲು ಕುಟ್ಟುವ ಕೆಲಸ
ಸೂರ್ಯ ಮುಳುಗಿದ ಅವನ ತಲೆಯೊಳಗೆ

ಇವನ ಹಠದೆದುರು ಚಟಪಟ ಸಿಡಿವ ಬಂಡೆಗಳುಕಣ್ಣಲ್ಲಿ ಒಂದಷ್ಟು ದುಃಖಒಂದಷ್ಟು ಖುಷಿಗುಡ್ಡದಡಿ ಇಂಗಿದ್ದ ಸ್ವಪ್ನ ಸಂಗಾತಿಗಳ ರಕ್ತ ಹುಡುಕಿ ಪ್ರೀತಿಸುವೆ ಎಂಬಂತೆ ಗುಡ್ಡ ಕಡಿಯುತ್ತಲೇ ಹೋದಜನ ಇದ್ದರು ಅಲ್ಲಿ ನಮ್ಮ ನಿಮ್ಮಂತೆನೋಡಿ ನಕ್ಕರು
 ತಿಳಿದು ನಕ್ಕರೆ ಬೆಳಗುಅಪಹಾಸ್ಯದ ನಗು ಕತ್ತಲು
ಹುಚ್ಚು ತಲೆಗೇರಿದೆ ಎಂದರು
ಅವನ ತಲೆಯೊಳಗೆ ಜನ ಕಾಣದ ಬೆಳಕು

 ಇವನೂ ಅದೇ ಗುಡ್ಡದಲ್ಲಿ ಸತ್ತಾನುಪ್ರೇಮ ಪ್ರೇತವಾಗಿ ಕಾಡುತ್ತಿದೆ ಎಂದರುಆತ ಗುಡ್ಡವನ್ನೇ ಪ್ರೀತಿಸಿದಗುಡ್ಡ ಅವನೆದುರು ಮಗುವಾಗಿತ್ತುಜನಕ್ಕೆ ಆಡಿಕೊಳ್ಳುವ ಆಟಅವನಿಗೆ ಹೂಡಿ ಗೆಲ್ಲುವ ಹಠಜನರ ಮಾತಿಗೆ ಆತ ಕಿವುಡಮನದ ಮಾತ ಆಲಿಸಿ ನಡೆದವ

ಕಳೆದದ್ದು ವರ್ಷ ಒಂದೆರಡಲ್ಲಲೆಕ್ಕಕ್ಕೆ ಇಪ್ಪತ್ತುವಾರದಿನಕ್ಷಣಗಳ ಲೆಕ್ಕದಲ್ಲಿ ಸಾವಿರ ಸಹಸ್ರಕಾಲ ಆತನೆದೆಯ ಮಿಡಿತಇಳಿದ ಬೆವರುಬಸಿದ ನೆತ್ತರ ಬಿಸಿಗೆ ಕರಗಿದ್ದು ಕಲ್ಲು ಬಂಡೆಗಳ ಗುಡ್ಡಎದ್ದು ನಿಂತಿದ್ದ ಗುಡ್ಡ ಮಂಡಿಯೂರಿ ಅವನ ಮಡಿಲ ಸೇರಿದಾಗ 1982 ಸುದಿನವೊಂದು ಅರಳಿ ನಲಿದಿತ್ತು.

* * * * * * * *

ಅವನೂರಿನಿಂದ ಪಕ್ಕದೂರಿಗೆ ಗುಡ್ಡ ಬಳಸಿ ಬಂದರೆ ಎಪ್ಪತ್ತು ಮೈಲುಸಹಸ್ರ ಹೆಜ್ಜೆಗುಡ್ಡ ಕಡಿದುರುಳಿ ಪಥವ ಬಿಟ್ಟಾಗ ಏಳು ಮೈಲುನೂರು ಪಾದನಕ್ಕಿದ್ದ ಜನ ಕೈ ಮುಗಿದರುಅವನ ಕಣ್ಣಲ್ಲಿ ತಲೆಯೊಳಗಿನ ಸೂರ್ಯ ಮಿನುಗುವ ಕಾಲಪ್ರೇಮ ಪಕ್ವವಾಗಿತ್ತು
ವೃದ್ದಾಪ್ಯ ದೇಹಕ್ಕೆಚೈತನ್ಯಕ್ಕಲ್ಲ
ಪ್ರೇಮದ ಅಮೃತ ಕುಡಿದವರಿಗೆ ಚೈತನ್ಯ ಪದತಲದ ಶರಣಾರ್ಥಿ

ಹುಚ್ಚನೆಂದವರು ಸಂತನೆಂದರುಗುಡ್ಡ ತಲೆಯೇರಲಿಲ್ಲಆತ ಅಹಂಕಾರವಾಗಲಿಲ್ಲಗುಡ್ಡದ ಅಹಂಕಾರ ಕಳೆದವಪ್ರೇಮವಾಗೇ ಉಳಿದವನನ್ನದೇನಿದೆ ಶ್ರಮಎಲ್ಲಾ ಅವಳ ಪ್ರೇಮ ಎಂದು ಮೇಲೆ ಕೈ ತೋರಿದಜನಕ್ಕೆ ಮುಗಿಲೆತ್ತರದ ವ್ಯಾಪ್ತಿ ತಿಳಿಯದುಪ್ರೇಮದ ಪಥಿಕನೆಂದು ಪೂಜಿಸಿದರುಸೂರ್ಯ ಸಾಹಸಕ್ಕೆ ನಿರಹಂಕಾರಕ್ಕೆ ಸಾಕ್ಷಿಯಾದಗೆದ್ದದ್ದು ಹಠವಲ್ಲಪ್ರೇಮ

ಅವಳು ಇರುವವರೆಗೆ ಮನುಷ್ಯ ಬೆಳೆವವರೆಗೆ ಪ್ರೇಮ ಅವಳ ಸೊತ್ತು
ಸೀಮಿತ ವೃತ್ತ
ಅವಳು ಅಳಿದ ಮೇಲೆಒಳಗೆಂಬುದು ಬೆಳಗಿದ ಮೇಲೆ ಪ್ರೇಮ ಜಗದ ತುತ್ತು
ಪ್ರೇಮದಾಚೆಗೂ ಕಾಣ್ಕೆಯಿರಬಹುದು.
ಪ್ರೇಮ ವಿಶ್ವವ್ಯಾಪ್ತವಾಗಲು ನಮ್ಮ ಕಾಣ್ಕೆಯಿದುನಮ್ಮೊಳಗಿನ ತಿಳಿವು.

ಇದು ಕಥೆಯಲ್ಲಬದುಕುಕಥೆಯಾಗುವ ಶಕ್ತಿಯಿರುವುದೂ ಬದುಕಿಗೇ ಅಲ್ಲವೇಪ್ರೀತಿಗಾಗಿ ಕೊಂದಸತ್ತ ಜನರ ಕಂಡಿದ್ದ ಭೂಮಿ ಪ್ರೀತಿಗಾಗಿ ಬದುಕ ಗೆಲ್ಲಿಸಿದಪಥವ ನಿರ್ಮಿಸಿದ ಪ್ರೇಮ ಪಥಿಕನ ಶಕ್ತಿಗೂ ಸಾಕ್ಷಿಗುಡ್ಡ ಕಡಿವಾಗ ಆತ ಬಡಿದ ಪ್ರತಿ ಏಟೂ ಮಾನವ ಜನಾಂಗದ ಎದೆಯೊಳಗಿಂದ ದ್ವೇಷಾಸೂಯೆ ಸ್ವಾರ್ಥಗಳ ಪರ್ವತ ಪುಡಿಗಟ್ಟಿ ಪ್ರೇಮದೆಡೆಗೆ ಪಥವ ಬೆಳಗಲಿ

ಪ್ರೇಮ ಇಬ್ಬರ ನಡುವಿನ ಬಂಧನವಾದರೆ ಚೆಂದ – ಮಲ್ಲಿಗೆಯಂತೆಮಲ್ಲಿಗೆಗೂ ಪರಿಮಳವಿದೆಅಂದವಿದೆಬದುಕಲ್ಲಿ ಯಾವುದೂ ವ್ಯರ್ಥವಲ್ಲಅರ್ಥವಿಲ್ಲದೆಯೂ ಇಲ್ಲಅರ್ಥಗಳ ಮೀರಿದರೆ ಪರಮಾರ್ಥ

ಪ್ರೇಮದ ಹರಿವು ಬಟ್ಟಲ ಹಾಲಿಂದ ಹರಿವ ನದಿಯಾದರೆಹಾಲ್ಬೆಳದಿಂಗಳಾದರೆ ಜಗಕೆಲ್ಲ ತಂಪುಪ್ರೇಮಿಯಾಗಿದ್ದವ ಅರ್ಥ ಕಾಮಗಳ ಮೀರಿದರೆ ಪರಮಾರ್ಥಗಳ ಪಡೆದಂತೆಪರಮಾತ್ಮನೆಡೆಗೆ ನಡೆದಂತೆ

ನಂಬಿದ ಪರಮಾತ್ಮ ನಂಬಿಕೆಯ ತಳದಲ್ಲಿ
ಕಾಣ್ಕೆಯ ಪರಮಾತ್ಮ ಸಾಧನೆಯ ಶಿಖರದಲ್ಲಿ
ಗೆದ್ದವ ಬೀಗಲಾರಬೀಗಿದರೆ ಸಂತನಾಗಲಾರ

ಈತ ಪ್ರೇಮ ಸಂತ - ಜನ ಕರೆದದ್ದುಆತ ಮಾತ್ರ ಮಗುವಂತೆ ವಿಶ್ವವ ಪ್ರೇಮಿಸಿ ಜಗವ ತೊರೆದದ್ದುಸಮಾಧಿ ಮಹಲು ನೋಟಕ್ಕೆ ಚಂದಬದುಕಿಗೆ ಮಾರ್ಗ ಬೇಕು ನಡೆಯುವುದಕ್ಕೆಗೆಲ್ಲುವುದಕ್ಕೆನಂಬಿದ್ದಾರೆ ಜನ ಅವನೂರಲ್ಲಿನಂಬಿದಂತೆ ನಟಿಸಿರಲೂಬಹುದು.  ಎಲ್ಲ ಮೀರಿ ಎಲ್ಲರೆದೆಯಲ್ಲಿ ಹುಟ್ಟಬೇಕಿದೆ ಆತಕನಸ ತಿಳಿದೆಚ್ಚರದ ಅರಿವು ಮೂಡಬೇಕಿದೆ ಈಗ.

* * * * * * * *

ಬಿಹಾರದ ಗಯಾ ಜಿಲ್ಲೆಯ ಗೌಲ್ಹಾರ್ ಎಂಬ ಊರುಅಲ್ಲಿ ಉಳಿಸುತ್ತಿಗೆಹಗ್ಗಗಳ ಬಳಸಿ 25 ಅಡಿ ಎತ್ತರದ ಕಲ್ಲು ಗುಡ್ಡವ ಕಡಿದು 360 ಅಡಿ ಉದ್ದದ 30 ಅಡಿ ಅಗಲದ ರಸ್ತೆ ನಿರ್ಮಿಸಿದವನ ಹೆಸರು ದಶರಥ ಮಾಂಜಿನಿರಂತರ 20 ವರ್ಷಗಳ ಅವನೊಬ್ಬನ ಹೋರಾಟ ಅಲ್ಲಿನ ರಸ್ತೆ ಎನ್ನುತ್ತಾರೆ



ಅಲ್ಲಿನ ಜನ ನೆನೆಯುತ್ತಾರೆ ಅವನನ್ನುಅವನಿಗಾಗಿ ಪುಟ್ಟ ಸ್ಮಾರಕವೊಂದಿದೆಯಂತೆ ಅಲ್ಲಿಸ್ಮರಣೆಗೆ ಸ್ಮಾರಕದಾಚೆಯದನ್ನು ಕೊಟ್ಟವ ಆತಸ್ಮಾರಕದಲ್ಲಿಟ್ಟು ಮರೆಯುವವರು ನಾವುನಮ್ಮೊಳಗಿನ ತಿಳಿವಿಗೆ ಬೆಳಕ ಚೆಲ್ಲಿ ಅಕ್ಷರವಾದ ಅವನ ಪ್ರೇಮ ಎಲ್ಲ ಗುಡ್ಡಗಳ ಕಳೆದು ಮಾನವನೆದೆಯ ಸೇರಿ ಜಗವ ಪ್ರೇಮಧಾಮವಾಗಿಸಲಿ.


                                                       * * * * * * * *

ದಿನಾಂಕ: 16.09.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ 
ಲಿಂಕ್ ಬಳಸಿ  http://avadhimag.com/?p=63693



(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ    http://samudrateera.wordpress.com/  ಗೆ ಭೇಟಿ ನೀಡಿ)