ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Saturday 21 September 2013

ನಾಗರಿಕತೆಯ ತೊಟ್ಟಿಲಲ್ಲಿ ಜೀವಂತಿಕೆಯ ಕನಸು

ಸಾಗರ ಸಮ್ಮುಖ//ರಘುನಂದನ ಕೆ.

ಅನಂತ ವಿಶ್ವ ಭೂಮಿ ಎಷ್ಟೋ ನಾಗರಿಕತೆಗಳಿಗೆ ತೊಟ್ಟಿಲುಕಾಲನ ಗರ್ಭದಲ್ಲಿ ಅನಾದಿ ಕಾಲದಿಂದ ಅಸಂಖ್ಯ ನಾಗರಿಕತೆಗಳು ಹುಟ್ಟಿ ಕರಗಿ ಮರೆಯಾಗಿವೆಬೆಳೆದು ಬಂದದ್ದೆಷ್ಟುಉಳಿದು ನಿಂತದ್ದೆಷ್ಟುಕಳೆದು ಹೋದದ್ದೆಷ್ಟು ಎಂದು ಹುಡುಕುತ್ತಲೇ ಇದ್ದಾನೆ ಇಂದಿನ ನಾಗರಿಕತೆಯ ಮನುಷ್ಯಅವನಿಗೆ ತನ್ನದೇ ಮಹಾನ್ ನಾಗರಿಕತೆ ಎಂದು ಭ್ರಮಿಸುವ ಚಪಲಕಾಡ ನಡುವೆನದಿ ಬಯಲುಗಳಲ್ಲಿ ಅರಳಿದಬೆಳೆದ ಬದುಕ ವಿಧಾನಗಳನ್ನು ನಾಗರಿಕತೆ ಎಂದು ಒಪ್ಪಿಕೊಳ್ಳಲಾರಆದಿಕಾಲದ ಮಾನವನ ನೆಮ್ಮದಿಯ ಜೀವನ ಇಂದಿನವನ ಪಾಲಿಗೆ ನಾಗರಿಕತೆ ಆಗದಿರುವುದೇ ಹೆಚ್ಚು
ಒಂದು ವ್ಯವಸ್ಥಿತ ಹಂತವನ್ನು ತಲುಪಿದ ಮಾನವನ ಸಮಾಜ ಅಥವಾ ಸಂಸ್ಕøತಿಯೇ ನಾಗರಿಕತೆ ಎನ್ನವುದು ವ್ಯಾಖ್ಯಾನವ್ಯವಸ್ಥಿತ ಹಂತ ತಲುಪಿದ ನಂತರ ಬೆಳವಣಿಗೆ ನಿಲ್ಲುತ್ತದಾನಾಗರಿಕತೆಯೆಂದರೆ ಬೆಳೆಯುತ್ತಲೇ ಇರುವ ಪದ್ಧತಿಯಾವ್ಯವಸ್ಥಿತ ಹಂತ ಯಾವುದು ಎನ್ನುವುದು ಪ್ರತೀ ಕಾಲಘಟ್ಟದಲ್ಲಿಯೂ ಪ್ರಶ್ನೆಯೇಇಂದಿನವನಿಗೆ ಈಗಿರುವುದು ವ್ಯವಸ್ಥಿತ ಹಂತಹಿಂದಿನದು ಚರಿತ್ರೆಬದಲಾವಣೆ ಕಾಲದ ನಿಯಮಪ್ರಕೃತಿ ತನ್ನ ಒಡಲಲ್ಲಿ ಎಷ್ಟೋ ವಿಸ್ಮಯಗಳನ್ನ ಅಡಗಿಸಿಕೊಳ್ಳುತ್ತ ಹೊಸ ಹೊಸ ನಾಗರಿಕತೆಗಳ ಸೃಷ್ಟಿಸುತ್ತ ಮತ್ತೆ ಮತ್ತೆ ಪುನರಾವರ್ತಿತವಾಗುತ್ತಲೇ ಇದೆ.
ಇತಿಹಾಸ ಕಥೆ ಹೇಳುತ್ತದೆಬೆಳೆದು ಬಂದ ನಾಗರಿಕತೆಗಳ ಪಳೆಯುಳಿಕೆಗಳ ತೆರೆದಿಡುತ್ತದೆಹರಪ್ಪಾ ಮೆಹಂಜೋದಾರ್ನಲ್ಲಿನ ವ್ಯವಸ್ಥಿತ ನಗರಗಳನೈಲ್ ನದಿಯ ದಡದಲ್ಲಿ ಹಬ್ಬಿ ನಿಂತ ಷಹರಗಳ ಚರಿತ್ರೆಯಲ್ಲಿ ಅಂದಿನ ನಾಗರಿಕತೆ ಸಿಗುತ್ತದೆಆದರೆಅಂದಿನ ಜನರ ಮಸ್ಥಿತಿ ಇತಿಹಾಸವನ್ನು ಮೀರಿದ್ದಲ್ಲವಾಇಂದು ಬೆಳೆದು ನಿಂತ ಮಾನವ ಜನಾಂಗದ ನಾಗರಿಕತೆಯಲ್ಲೂ ದೂರದ ಕಾಡುಗಳಲ್ಲಿಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಆಫ್ರಿಕಾದ ಹೆಸರರಿಯದ ಪ್ರದೇಶಗಳಲ್ಲಿದಕ್ಷಿಣ ಅಮೆರಿಕಾದ ಬ್ರೆಜಿಲ್ಅಮೇಜಾನ್ ಅರಣ್ಯ ಪ್ರದೇಶಗಳಲ್ಲಿಯೂ ಚರಿತ್ರೆ ದಾಖಲಿಸಲು ಮರೆತ ನಾಗರಿಕತೆಗಳಿದೆಯಲ್ಲ
ಸಂಸ್ಕøತಿಪರಂಪರೆಗಿಡಬಳ್ಳಿಪಶುಪಕ್ಷಿಗಳ ಬಗೆಗಿನ ಜ್ಞಾನವನ್ನು ಅನುಭವದಿಂದಲೇ ಶೋಧಿಸಿಕೊಳ್ಳುತ್ತ ನಿಸರ್ಗದೊಂದಿಗೆ ಭಕ್ತಿಪೂರ್ವಕ ಸಂಬಂಧವಿಟ್ಟುಕೊಂಡ ಕಾಡು ಮನುಷ್ಯನ ಮನೋಧೈರ್ಯಲ್ಯಾಬ್ಗಳಲ್ಲಿ ಹವಾನಿಯಂತ್ರಿತ ಕಟ್ಟಡಗಳಲ್ಲಿ ಕುಳಿತ ನಾಗರೀಕನೆನ್ನುವವನಿಗೆ ಎಲ್ಲಿದೆಪರಂಪರೆಯ ಹರಿವಿನಿಂದ ಪಡೆದ ಬುದ್ಧಿವಂತಿಕೆಯಿಂದ ಮರೆತಿರಬಹುದಾಗಿದ್ದ ವಿಜ್ಞಾನದ ಜ್ಞಾನವನ್ನು ಪುನಃ ಪಡೆದು ಹಿಂದಿನದಕ್ಕೆ ಅನಾಗರಿಕತೆಯ ತೆರೆ ಸರಿಸುತ್ತಾನೆ ಮಾನವಗಿರಿ ಶಿಖರಗಳ ಹತ್ತಬೇಕುಇಳಿಯಬೇಕುಮಳೆ ಛಳಿಗೆ ತುತ್ತಾಗಬೇಕುಕಾಡು ಪ್ರಾಣಿಗಳೊಂದಿಗೆ ಹೊಡೆದಾಡಬೇಕುಒಡನಾಡಬೇಕುನದಿ ತೀರದಲ್ಲೋ ಜಲಸಿರಿಯ ಮೈದಾನಗಳಲ್ಲೋ ಗೆಡ್ಡೆ ಗೆಣಸು ತಿನ್ನುತ್ತ ಭೇಟೆಯಾಡುತ್ತ ಸರಳವಾಗಿ ಬದುಕಿದ್ದ ಜನ ಇಂದಿನ ನಾಗರಿಕತೆಯಲ್ಲಿ ಆದಿವಾಸಿಗಳಾಗಿಯೂ ಅನಾಗರಿಕತೆಯ ಲೇಪದೊಂದಿಗೆ ಗುರುತಿಸಲ್ಪಡುವುದು ಕಾಲದ ಸೋಜಿಗ.

ಮನುಷ್ಯ ತನ್ನ ಕೆಲಸಗಳ ತಾನೇ ಮಾಡಿಕೊಳ್ಳುತ್ತ ಸ್ವಾಲಂಭಿಯಾಗಿರುವಾಗ ಸಂತಸದಿಂದಿದ್ದಸುಖದ ಹುಡುಕುವಿಕೆಯ ಅನ್ವೇಷಣೆಯಲ್ಲಿ ಹೊಸತುಗಳ ಆವಿಷ್ಕಾರ ಮಾಡಿ ಸಲಕರಣೆ ಯಂತ್ರಗಳ ಅವಲಂಬಿಯಾದಾಗ ಪ್ರಕೃತಿಯಿಂದ ದೂರ ಸರಿಯುತ್ತ ಅಂತರಂಗವನ್ನು ಕೊಂದುಕೊಳ್ಳುತ್ತ ಬದುಕನ್ನೇ ವಾಣಿಜ್ಯವಾಗಿಸಿ ಜೀವಿಸುವುದ ಮರೆತನಾಗರೀಕನೆನಿಸಿಕೊಳ್ಳುವ ಮಾನವ ಆದಿವಾಸಿಗಳಷ್ಟು ಖುಷಿಯಲ್ಲಖುಷಿಗಾಗಿ ಹುಡುಕಾಟವಿದೆ ಇಲ್ಲಿಅವಲಂಬನೆ ಕೊಂದಿದ್ದು ಮನುಷ್ಯನ ಜೀವಂತಿಕೆಯೊಂದನ್ನೇ ಅಲ್ಲ ಅವನ ಆತ್ಮ ವಿಶ್ವಾಸ ಆತ್ಮ ಸ್ಥೈರ್ಯಗಳನ್ನು ಕೂಡಎಲ್ಲ ಹೋರಾಟಗಳ ನಡುವೆಯೂ ಆತ್ಮವಿಶ್ವಾಸದಿಂದ ಮನುಷ್ಯ ಬೀಗುತ್ತಿದ್ದ ದಿನಗಳ ಕಾಲ ಕಂಡಿದೆಇಂದು ಅದೇ ಕಾಲ ಚಿಕ್ಕಪುಟ್ಟ ವಿಷಯಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಮನುಷ್ಯನ ಕಾಣುತ್ತಿದೆಬದಲಾದದ್ದು ಕಾಲ ಅಲ್ಲ ಮನುಷ್ಯಬೆಳೆಸಬೇಕೆಂದು ಆವಿಷ್ಕರಿಸಿದ್ದು ಬಳಸಿದ್ದು ಮನುಷ್ಯನ ಕೊಳೆಸುತ್ತಿದೆ.
ಎಂದೋ ತೊರೆದ ಗಂಡನ ಕಾಲಿಲ್ಲದ ಮಗನ ಪೊರೆಯುವ ಅಂಡಮಾನ್ ಕಾಡುಗಳ ಸಾಗರದೀಪದ ಹೆಂಗಸಿನ ಛಲಆನಂದ ಷಹರದ ಮಾನವನ ಅರಿವಿಗೇ ನಿಲುಕದೆ ಸತಾಯಿಸುತ್ತದೆಒಂದೇ ಸಮನೆ ತುಯ್ಯುವ ಅಲೆ ಸ್ವಲ್ಪ ಬೆಳೆದರೂ ಸಾಕು  ಮನುಷ್ಯ ಕಂಗಾಲಾಗುತ್ತಾನೆಆಸರೆಗೆ ಅವಲಂಬನೆಗೆ ಹುಡುಕುತ್ತಾನೆಪ್ರಕೃತಿಯೇ ಸಿಡಿದೆದ್ದು ಬಡಿದರೂ ಏಕಾಂಗಿಯಾಗಿ ಎದುರಿಸುವ ಮನೋಧೈರ್ಯದ ಮನುಷ್ಯ ನಮ್ಮೊಳಗಿಂದ ಮತ್ತೆ ಹುಟ್ಟಬೇಕಿದೆಅಂತಹ ಮನುಷ್ಯ ಐಷಾರಾಮಿ ಅಮಲುಗಳಲ್ಲಿ ಅರಳಲಾರಪ್ರಕೃತಿಯೊಡನೆ ಬೆಸೆದ ಹಸಿರಲ್ಲಿ ಮೂಡಬಲ್ಲಬಾಹ್ಯ ನಟನೆಗಿಂತ ಅಂತರಂಗದ ಸಹಜ ಆನಂದಗಳ ಹುಡುಕುವ ದಿನ ಬಂದಾಗ ಎಲ್ಲರ ಮನಸ್ಸಲ್ಲಿ ಮನುಷ್ಯರಾಗುವ ಜೀವಂತ ಕನಸುಗಳು ಅರಳುತ್ತವೇನೋ.
ಅಭಿವೃದ್ಧಿ ಮತ್ತು ಆಧುನಿಕತೆ ನೆಲದ ಸಂಸ್ಕøತಿಯಿಂದ ಮನುಷ್ಯನನ್ನು ದೂರ ಮಾಡಿದ್ದು ಹೇಗೆಅರಿವಿಗೇ ನಿಲುಕದಂತೆ ಭಕ್ತಿ ಪೂರ್ವಕ ಬಂಧ ಹೊಂದಿದ್ದ ನಿಸರ್ಗವನ್ನ ಉಪಭೋಗದ ವಸ್ತುವನ್ನಾಗಿಸುವ ಅಹಂಕಾರವನ್ನು ಮನುಷ್ಯನಿಗೆ ಕಲಿಸಿದ ನಾಗರಿಕತೆ ಯಾವುದುಬೆಳೆದು ಬಂದ ಸಂಸ್ಕೃತಿ ಸಂಸ್ಕಾರವಾಗಿ ಮಾನವನ ಎದೆಯೊಳಗೆ ಇಳಿದಿದ್ದಲ್ಲದೆ ಮಾನವತೆ ಮೂಡದುಮಾನವತೆಯ ಜೀವಂತಿಕೆ ಇಲ್ಲದೆ ನಾಗರಿಕತೆ ಚರಿತ್ರೆಯ ಪಾಠ ಮಾತ್ರವಿಕಾಸವಾದ ಹೇಳುತ್ತದೆಪ್ರಬಲವಾದದ್ದು ಶಕ್ತಿಯುತವಾದದ್ದು ಉಳಿಯುತ್ತದೆಯೆಂದುನಾಗರಿಕತೆ ಸಾರುತ್ತಿದೆಪ್ರಬಲತೆಯನ್ನು ನಿಯಂತ್ರಿಸಲಾಗದೆ ತನ್ನದೇ ಶಕ್ತಿ ಜ್ಞಾನದಿಂದ ನಾಗರಿಕತೆ ಸಾಯುತ್ತದೆಂದು.
ನಗ್ನ ಆದಿವಾಸಿಗಳ ಜರೆವ ನಾಗರೀಕನ ಮನಸ್ಸು ಬೆಳವಣಿಗೆಯ ಹಂತಗಳ ಅಣಕಿಸುತ್ತಿದೆತಮ್ಮ ಕತ್ತಲ ಮುಚ್ಚಿಕೊಳ್ಳಲಾಗದವ ಉಳಿದವರ ಬೆತ್ತಲೆಯೆಡೆಗೆ ಕೈ ತೋರಿಸುವ ವ್ಯಂಗ್ಯಕ್ಕೆ ನಾಗರಿಕತೆ ನೋಯುತ್ತಿದೆಆಧುನಿಕ ನಾಗರಿಕತೆ ಅನಾಗರೀಕರನ್ನು ಸೃಷ್ಟಿಸಿದೆ ಎನ್ನುವುದು ಇಂದಿನ ಬದುಕಿನ ಬಹುದೊಡ್ಡ ವ್ಯಂಗ್ಯಜನನಿಬಿಡ ನಗರಗಳಲ್ಲಿ ಬದುಕುವವರಿಗಿಂತ ಪ್ರಕೃತಿಯ ಒಡಲಲ್ಲಿ ಬದುಕುವ ಜೀವಗಳು ಹೆಚ್ಚು ಆತ್ಮಗೌರವದವರೂಜೀವಂತಿಕೆಯುಳ್ಳವರೂ ಆಗಿರುತ್ತಾರೆಇವರಿಗೆ ಕೃತಕತೆಯ ಸೋಂಕಿಲ್ಲಅಮ್ಮಂದಿರ ವೃದ್ಧಾಶ್ರಮಗಳಿಗೆ ನೂಕುವ ಹುಂಬತನವಿಲ್ಲಸಹಜತೆಯಲ್ಲೇ ಕಿತ್ತಾಡುತ್ತಾರೆಮರುಕ್ಷಣವೇ ಪ್ರೀತಿ ತೋರುತ್ತಾರೆಪ್ರಕೃತಿಯ ತುಸು ನೋವಿಗೂ ರೋಧಿಸುತ್ತಾರೆಎಲ್ಲರನ್ನ ಬದುಕಿನ ತೆಕ್ಕೆಯೊಳಗೆ ಕೈ ಚಾಚಿ ಬರಮಾಡಿಕೊಳ್ಳುತ್ತಾರೆಯಾವುದಕ್ಕೂ ಯಾಂತ್ರಿಕತೆಯ ಕೃತಕತೆಯ ಲೇಪವಿಲ್ಲಇಲ್ಲಿ ಎಲ್ಲವೂ ಸ್ವಚ್ಛಸರಳಎಲ್ಲೋ ದೂರದಲ್ಲಿ ಕನಸಲ್ಲೂ ಅಸ್ಪಷ್ಟವಾಗಿ ಕಾಣುತ್ತಿರುವ ನಮ್ಮದೇ ಹಿರಿಯರ ಇಂತಹ ಚಿತ್ರಗಳೆಲ್ಲ ಮತ್ತೆ ಮುನ್ನಲೆಗೆ ಬರಲಿತನ್ನ ಪ್ರತಿಬಿಂಬಗಳನ್ನೇ ಗುರುತಿಸಲಾಗದ ಮುಖವಾಡದ ನಾಗರಿಕರಿಗೆ ದಾರಿ ತೋರಲಿ.   

  * * * * * * * *
ಚಿತ್ರಕೃಪೆ : ಅಂತರ್ಜಾಲ
  (ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ ಭೇಟಿ ನೀಡಿ http://samudrateera.wordpress.com/)

ದಿನಾಂಕ: 31.08.2013ರಂದು 'ಅವಧಿ'ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ - 

* * * * * * * *