ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday 12 February 2015

ಕೊಳಲ ದನಿಯ ಉಂಗುರಗಳ ಹಾಡು ಕಾಡುವಾಗ

 ಸಾಗರ ಸಮ್ಮುಖ//ರಘುನಂದನ ಹೆಗಡೆ.

ನಕ್ಕ ಹಾಗೆ ನಟಿಸಬೇಡನಕ್ಕುಬಿಡು ಸುಮ್ಮನೆ;
ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ!

ಅರೆಅವಳ್ಯಾಕೆ ನಕ್ಕ ಹಾಗೆ ನಟಿಸುತ್ತಿದ್ದಾಳೆಅವಳ ನಟನೆ ಯಾರಿಗಾಗಿಅವನದ್ಯಾಕೆ ಸುಮ್ಮನೆ ನಗು ಎನ್ನುತ್ತಿದ್ದಾನೆನಗುವನ್ನ ಹುಟ್ಟಿಸಲು ಅವನಲ್ಲಿ ಕಾರಣಗಳೇ ಕಳೆದು ಹೋಗಿದ್ಯಾಅವಳ ಸಹಜ ನಗುವನ್ನ ಕದ್ದು ನಟಿಸುವಂತೆ ಮಾಡಿದ್ಯಾವದುಅವಳಲ್ಲಿ ಅವಳ ಒಲವಿನ ಒಳಮನೆಯಲ್ಲಿ ಅದ್ಯಾವ ಕಾವು ಸುಡುತ್ತಿದೆಕತ್ತಲೆ ಏಕೆ ಆವರಿಸಿದೆಅವನು ಬೆಳಕಾಗಿಸಲು ತಂಪಾಗಿಸಲು ಏನು ಮಾಡಲಾರನಾಅವನದ್ಯಾಕೆ ಹಾರೈಕೆಯ ಮಾತನ್ನಾಡುತ್ತಿದ್ದಾನೆ ಹೀಗೆಲ್ಲ ಪ್ರಶ್ನೆಗಳ ಹುಟ್ಟಿಸುತ್ತ ಎದುರಾಗುತ್ತದೆ ಕೆಎಸ್ನರಸಿಂಹಸ್ವಾಮಿಯವರ ‘ನಕ್ಕು ಬಿಡು’ ಕವನದ ಮೊದಲೆರಡು ಸಾಲು. 

ಕವನದ ಪೂರ್ಣತೆಯಲ್ಲಿ ಹೀಗೊಂದು ಅವಳು ಹಾಗೊಬ್ಬ ಅವನು ಸಿಕ್ಕುತ್ತಾರೆಆದರೆ  ಎರಡು ಸಾಲುಗಳಲ್ಲಿ ಅವಳು ಅವನೂ ಆಗಬಹುದುಅವನು ಅವಳೂಅಷ್ಟಕ್ಕೂ ಮನಸ್ಸೆನ್ನುವುದು ಅವಳಿಗೂ ಅವನಿಗೂ ಇಬ್ಬರಿಗೂ ಇರುತ್ತದಲ್ವಾಒಳಮನೆಯಲ್ಲಿ ಕಾವು ಯಾರಿಗೂ ಕಾದಿರಬಹುದು ತಾನೆಅಷ್ಟಕ್ಕೂ ಸುಮ್ಮನೆ ನಗುವೊಂದು ಅರಳುತ್ತದಾಸುಮ್ಮಸುಮ್ಮನೆ ನಕ್ಕುಬಿಟ್ಟರೆ ಅದು ನಟನೆಯಾಗದಾಅವಳೊಲವಿನ ಒಳಮನೆಯಲ್ಲಿ ಕುಳಿತಿರುವವರಾರು ಒಳಮನೆಯ ಕಾವುಕತ್ತಲೆ ಅವನನ್ನ ಕಾಡುತ್ತಿದೆಯಾಅವನನ್ನ ಖುಷಿಯಾಗಿಡಲು ಅವಳು ನಕ್ಕ ಹಾಗೆ ನಟಿಸುತ್ತಿದ್ದಾಳಾಅದು ಗೊತ್ತಾಗಿ ಅವನ ಜೀವ ಚಡಪಡಿಸಿ ಅವಳ ಒಳಮನೆಯಲ್ಲಿ ಬೆಳಕಾಗಲಿತಂಪಾಗಲಿ ಎಂದು ಹಾರೈಸುತ್ತಿದ್ದಾನಾ?? ಎರಡೇ ಸಾಲುಗಳು ಎಲ್ಲೆಲ್ಲೋ ಕರೆದೊಯ್ದು ಏನೇನೋ ಹುಡುಕಾಟಕ್ಕೆ ಹಚ್ಚಿಬಿಟ್ಟು ಸತಾಯಿಸುತ್ತದೆಹೀಗೆ ಹುಡುಕುತ್ತ ಹೋದರೆ ಎರಡೇ ಸಾಲು ನಮ್ಮೊಳಗೊಂದು ಅವ್ಯಕ್ತ ನೋವಿನ ಕಥೆಯನ್ನೇ ತಂದು ಬಿಡಬಲ್ಲದೇನೋ.

ಹೀಗೆ ಒಂದಷ್ಟು ಪ್ರಶ್ನೆಗಳ ಮೂಡಿಸುತ್ತ ಶುರುವಾಗುತ್ತದೆ ಕವನಮುಂದುವರೆಯುತ್ತ ಅಷ್ಟಷ್ಟೆ ಸ್ಪಷ್ಟವಾಗುತ್ತಾಸ್ಪಷ್ಟವಾದ ಮೇಲೂ ಅಸ್ಪಷ್ಟವಾಗಿಯೇ ಉಳಿಯುತ್ತ ಬೆಳೆಯುತ್ತ ಹೋಗುತ್ತದೆಹಾರೈಕೆಯೊಂದಿಗೆ ಶುರುವಾದಂತಿರುವ ಕವನ ಮುಂದಿನ ಸಾಲುಗಳಿಗೆ ಹೊರಳುವಷ್ಟರಲ್ಲಿ ಮತ್ತಷ್ಟು ಹಾರೈಕೆಗಳಾಗುತ್ತದೆಮೊದಲೆರಡು ಸಾಲುಗಳ ವಿಷಾದವನ್ನ ದಾಟಿ ಸುಖದ ಆಶಯದ ಬೆಳದಿಂಗಳ ಚೆಲ್ಲುತ್ತದೆ ಕವನ  ಮುಂದಿನ ಸಾಲುಗಳಲ್ಲಿ.

ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ!
ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!

ಬಾನತುಂಬ ತಾರೆ ಮಿನುಗಿನಿನಗೆ ಶುಭವ ಕೋರಲಿ!
ಹೂ ಬೇಲಿಯ ಹಾದಿಯಲ್ಲಿ ಬೆಳ್ಳಿಹಕ್ಕಿ ಹಾಡಲಿ!

ಬೆಳದಿಂಗಳು ಅರಳುವ ಅಲೆಗಳ ಸೊಗಸನ್ನ ಒಲವಾಗಿಸಿ ಒಲವ ತೆರೆಗಳಲ್ಲಿ ಮತ್ತಷ್ಟು ಬೆಳದಿಂಗಳ ತುಂಬಿ ಮಲ್ಲಿಗೆ ಹೂವರಳಿಸುವ ಹಸಿರು ಕನಸಿನ ಆಶಯ ಅವನದುತಾರೆಚಂದ್ರಬೆಳದಿಂಗಳೆಲ್ಲವ ಕರೆದು ಶುಭ ಕೋರುತ್ತವೆ ಸಾಲುಗಳುಯಾರು ಯಾರಿಗೂ ಹಾರೈಸಬಹುದಾದ ಸುಲಭ ಸಾಲುಗಳಂತೆ ಗೋಚರಿಸುತ್ತಲೇ ಮೊದಲೆರಡು ಸಾಲಿನ ವಿಷಾದಕ್ಕೆ ಹೊಂದಿಅವಳ ಕನಸಲ್ಲಿ ಇವೆಲ್ಲ ಈಗ ಯಾಕಿಲ್ಲ ಎನ್ನುವ ಸಣ್ಣ ಸಂದೇಹವೊಂದನ್ನ ಉಳಿಸಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಮತ್ತೆ ಹೂ ಬೇಲಿಯ ಬಂಧನಕ್ಕೆ ತಳ್ಳುತ್ತದೆ

ನಿಜಮೂರು ಸಾಲುಗಳ ದಾಟುತ್ತಿದ್ದಂತೆ ಸಣ್ಣ ತಡೆಹೂ ಬೇಲಿಯ ಹಾದಿ ಕೇಳಲೇನೋ ಚೆನ್ನ ಹಾರೈಕೆಯೇ ಎನಿಸಿದರೂಹೂವಿನದ್ದೇ ಆದರೂ ಬೇಲಿ ಬೇಲಿಯೇ ಅಲ್ಲವಾಅಲ್ಲಿಗೆ ಹಾದಿ ನಿಚ್ಚಳಹೂ ಬೇಲಿಯ ನಡುವೆಯೇ ಸಾಗಬೇಕುಕನಸಲ್ಲಿ ಮಲ್ಲಿಗೆ ಅರಳುವಾಗ ಹಾದಿಯನ್ನ ಹೂ ಬೇಲಿ ಬಂಧಿಸುತ್ತದೆಅಲ್ಲಿಗೆ ಎಲ್ಲ ಹಾರೈಕೆಯ ಖುಷಿಗೂ ಒಂದು ಬಂಧನವಿದೆಒಂದು ದಾರಿಯಿದೆಎಲ್ಲ ಹಾರೈಕೆಗಳೂ  ಹಾದಿಯಲ್ಲೇ ಹಾಡಾಗಬೇಕುಹಸಿರು ಕನಸಿನ ಲೋಕದಲ್ಲಿ ತಾರೆಬೆಳದಿಂಗಳಿನಂತ ಎತ್ತರೆತ್ತರದ ಆಶಯಆದರೆ ವಾಸ್ತವದ ಉಸಿರ ನಡೆಯಲ್ಲಿ ಪಾದ ಮಾತ್ರ ಹಾದಿಯಲ್ಲೇ ಸಾಗಬೇಕುಬೆಳ್ಳಿಹಕ್ಕಿಯ ಹಾಡಲ್ಲೆ ಖುಷಿ ಕಾಣಬೇಕು.

ನೀನೆಲ್ಲೂ ನಿಲ್ಲಬೇಡಹೆಜ್ಜೆ ಹಾಕು ಬೆಳಕಿಗೆ;
ಚಲಿಸುನಲ್ಲೆಸೆರಗ ಬೀಸಿ ಮೌನದಿಂದ ಮಾತಿಗೆ.

ಇದುವರೆಗೆ ಯಾರು ಯಾರಿಗಾದರೂ ಹೇಳುತ್ತಿದ್ದಿರಬಹುದಾದ ಮಾತುಗಳು  ಸಾಲಿನಲ್ಲಿ ‘ನಲ್ಲೆ' ಪ್ರವೇಶವಾಗುವುದರೊಂದಿಗೆ ಪಾತ್ರಗಳು ಸ್ಪಷ್ಟವಾಗುತ್ತವೆಮುಂದಿನ ಸಾಲುಗಳೆಲ್ಲಾ ಹೀಗೆ ಅಷ್ಟಷ್ಟೆ ಸ್ಪಷ್ಟವಾಗುತ್ತ ಹೋಗುತ್ತವೆಮೊದಲೆರಡು ಸಾಲುಗಳಲ್ಲಿ ಮೂಡುವಂತದ್ದೇ ಪ್ರಶ್ನೆಗಳು ಮತ್ತಿಲ್ಲೂ ಎದುರಾಗುತ್ತವೆಅವಳ್ಯಾಕೆ ನಿಂತಿದ್ದಾಳೆಅವಳ ಮೌನಕ್ಕೇನು ಕಾರಣಅವಳ್ಯಾಕೆ ಮಾತಾಡಬೇಕುಅವಳ ಮೌನ ಅವನನ್ನ ಕಾಡುತ್ತಿದೆಯಾಕೊಲ್ಲುತ್ತಿದೆಯಾಅವಳು ಮಾತಿಗೆ ಚಲಿಸಲಾಗದ್ದಂತದ್ದನ್ನ ಅವನೇನು ಮಾಡಿದ್ದಾನೆಅವ ಹೇಳುತ್ತಿರುವ ಬೆಳಕು ಅವಳಿಗೂ ಬೆಳಕಾಗಬಲ್ಲದಾ?? 

ನಿಲ್ಲಬೇಡ ಎಂದರೆ ಅವಳೀಗ ನಿಂತಿದ್ದಾಳಾನಿಲ್ಲುವ ಯೋಚನೆಯಲ್ಲಿದ್ದಾಳಾಚಲಿಸು ಎನ್ನುವ ಮಾತಲ್ಲೆ ನಿಂತು ಬಿಡಬಲ್ಲ ಭಯವೂ ಇದೆಯಾ ಹೀಗೆಲ್ಲ ಎನ್ನಿಸಿ ಭಾವಪ್ರಶ್ನೆ ಮತ್ತಷ್ಟು ದಟ್ಟವಾಗುತ್ತದೆಅವಳಿಗೆ ಶುಭ ಹಾರೈಸಿ ನಡೆಯುವಂತೆ ಅವನೇಕೆ ಉದ್ದೀಪಿಸುತ್ತಿದ್ದಾನೆಅವ ಜೊತೆಗಿದ್ದು ನಡೆಸಲಾರನಾ ಅಥವಾ ನಾ ನಿಲ್ಲುತ್ತೇನೆ ನೀನು ಬೆಳಕಿಗೆ ಹೆಜ್ಜೆ ಹಾಕು ಎನ್ನುತ್ತಿದ್ದಾನಾಅವಳದ್ಯಾಕೆ ಮಾತು ಬಿಟ್ಟಿದ್ದಾಳೆಮಾತಿನೆಡಗೆ ಏಕೆ ಚಲಿಸಬೇಕುಮೌನವನ್ನ ಅರ್ಥೈಸಿಕೊಳ್ಳುವ ಹಂತ ದಾಟಿ ಪ್ರೀತಿಗೆ ಮಾತಿನ ಅನಿವಾರ್ಯತೆ ಮೂಡಿಬಿಟ್ಟಿದೆಯಾ ಅವರ ನಡುವೆಅವಳ ಮಾತನ್ನ ಅವನೇ ಕಸಿದಿರಲೂಬಹುದಾಯಾವ ನೋವು ಮಾತ ನಿಲ್ಲಿಸಿ ಮೌನಕ್ಕೆ ದೂಡಿದೆ.

* * * * * * *

ಇಲ್ಲಿಯವರೆಗೆ ಆಂತರಂಗಿಕ ಭಾವಗಳ ಲೋಕದಲ್ಲಿ ಸಂಚರಿಸುತ್ತಿದ್ದ ಕವನ ಇಲ್ಲಿಂದ ಮುಂದೆ ಬಾಹ್ಯ ಪ್ರಪಂಚದೆಡೆಗೆ ಸರಿಯುತ್ತದೆಹಾಗೆ ಬಹಿರಂಗವಾಗುತ್ತಲೇ ಇದುವರೆಗೆ ಮೂಡಿದ್ದ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರವನ್ನೂ ನೀಡುತ್ತ ಹೋಗುತ್ತದೆಸಾಂಗತ್ಯದ ಸುಖ ಹಾಗೂ ನಿಧಾನವಾಗಿ ಆವರಿಸಿಬಿಡುವ ವಿಷಾದವನ್ನ ಕಟ್ಟಿಕೊಡುತ್ತ ಮುಂದುವರೆಯುವ ಕವನದಲ್ಲಿ ಮುಂದಿನ ಸಾಲುಗಳು ಇಂಟರ್ವಲ್ ನಂತರದ ಸಿನೆಮಾದಂತೆಸಣ್ಣ ಪ್ಲ್ಯಾಷ್ಬ್ಯಾಕ್ಒಂದಷ್ಟು ಹಳೆಯ ಮಧುರ ನೆನಪುಮುಂದಿನ ಬದುಕ ಬಗ್ಗೆ ಭರವಸೆಒಲವನ್ನಲ್ಲದಿದ್ದರೂ ಅವಳನ್ನಾದರೂ ಉಳಿಸಿಕೊಳ್ಳುವ ಆಸೆಜೊತೆಗೆ ನಡೆಯುವ ನಿರೀಕ್ಷೆ ಇವೆಲ್ಲ ದಾಖಲಾಗುತ್ತ ಹೋಗುತ್ತವೆ.

ಬೆಟ್ಟದಾಚೆಗೊಂದು ಬಯಲುಅದರ ತುಂಬ ಹಸುಗಳು,
ನಿನ್ನ ದನಿಗೆ ಕೊರಲನೆತ್ತಿ ಕುಣಿವ ಕಂದು ಕರುಗಳು

ನಿನ್ನ ಹಾಗೆ ನಿನ್ನೊಲವಿನ ಚಿಲುಮೆಯಂತೆ ಹನಿಗಳು;
ಹತ್ತಿರದಲೆ ಎತ್ತರದಲೆ ನನ್ನ ನಿನ್ನ ಮನೆಗಳು.

ನೀನು ಬಂದ ದಿಕ್ಕಿನಲ್ಲಿ ತಂಗಾಳಿಯ ಪರಿಮಳ;
ಹೂವರಳಿತು ಹಿಗ್ಗಿನಿಂದ ಹಾದಿಗುಂಟ ಎಡಬಲ.

ಹಾರೈಕಗಳ ಮೂಲಕ ಅವಳನ್ನ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಅವ ಈಗ ಹಳೆಯ ಮಧುರ ದಿನಗಳನ್ನ ನೆನಪಿಸಿಯಾದರೂ ಅವಳನ್ನ ನಗಿಸಬಹುದೇ ಎನ್ನುವ ಪ್ರಯತ್ನಕ್ಕಿಳಿದಿದ್ದಾನೆ ಇಲ್ಲಿಹತ್ತಿರದಲೆ ಎತ್ತರದಲೆ ನನ್ನ ನಿನ್ನ ಮನೆಗಳು ಎನ್ನುತ್ತ ಹತ್ತಿರದ ಮನೆಯಲ್ಲಿನ ಸಾಂಗತ್ಯಜೊತೆಗೂಡಿ ನಡೆದ ದಾರಿಬೆಟ್ಟದಾಚೆಯ ಬಯಲಲ್ಲಿ ಒಲವಿನ ಹನಿಗಳು ಚಿಲುಮೆಯಾದ ಕಾಲವನ್ನ ನೆನಪಿಸುತ್ತಾನೆಅವಳ ದನಿಗೆ ಕೊರಲನೆತ್ತಿ ಕುಣಿವ ಕರುಗಳು ಎನ್ನುತ್ತಲೆ ತಾನೂ ಹಾಗೇ ಅಲ್ಲವೆ ಅನ್ನುವ ಭಾವವನ್ನೂ ಬಚ್ಚಿಡುತ್ತಾನೆಅವಳು ಬಂದ ದಿಕ್ಕು ಅವನಿಗೆ ತಂಗಾಳಿಯಾಗಿಯೂ ಪರಿಮಳವಾಗಿಯೂ ಸೋಕುತ್ತದೆಅದೇ ಹಿಗ್ಗಿನಲ್ಲಿ ಬದುಕ ಒಲವ ದಾರಿಯ ಹೂವರಳಿದ್ದನ್ನು ಹೇಳುತ್ತಾನೆ ಸಾಲುಗಳಲ್ಲೆಲ್ಲ ಖುಷಿಯ ತುಣುಕುಗಳೇವಿಷಾದ ಹಾಗೂ ಪ್ರಶ್ನೆಗಳಲ್ಲಿದ್ದ ಕವನ ಇಲ್ಲಿ ಸುಖದೆಡೆಗೆ ಹೊರಳುತ್ತದೆಅದೇ ಸುಖದಲ್ಲಿ ನಿಲ್ಲುವಂತಿಲ್ಲ ಮುಂದಿನ ಸಾಲು ಹಿಂದಿನ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ವಿಷಾದದ ಕಾರಣವನ್ನು ತೆರೆದಿಡುತ್ತದೆ.

ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆತಿಳಿಯದು:
ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು.

ಎನ್ನುವಾಗಜತೆಯಲ್ಲಿದ್ದ ಅವಳನ್ನ ಬಿಟ್ಟು ಅವ ಮುಂದೆ ಹೋಗಿಬಿಟ್ಟಿದ್ದಾನೆಅವಳ ಹಸಿರು ಕನಸುಗಳಲ್ಲಿದ್ದ ಅವ ಮುನ್ನಡೆದಿದ್ದಾನೆಅವಳು ಮಾತು ಮರೆತಿದ್ದಾಳೆನಗುವೆನ್ನುವುದು ಕಳೆದು ನಟನೆಯಾಗಿದೆಒಂದು ಕಾಲದಲ್ಲಿ ಒಲವ ಪರಿಮಳಕ್ಕೆ ಕಾರಣವಾಗಿದ್ದ ‘ಎಡಬಲ ಹಬ್ಬಿದ ಹೂವರಳಿದ ಹಾದಿ’ ಅವಳು ಹಿಂದೆ ಉಳಿದಾಗ ‘ಹೂ ಬೇಲಿಯ ಹಾದಿ’ ಯಾಗಿ ಇಂದಿಗೆ ಬೇಲಿಯಾಗಿ ಬೆಳೆಯಿತೇ ಎನ್ನುವುದು ಕಾಡುತ್ತದೆಹಿಂದೆ ಮೂಡಿದ್ದ ಪ್ರಶ್ನೆಗಳಿಗೆ ಉತ್ತರವನ್ನ ಅಸ್ಪಷ್ಟವಾಗಿ ನೀಡುತ್ತಲೆ ಇಲ್ಲಿ ಮತ್ತಷ್ಟು ಹೊಸ ಪ್ರಶ್ನೆಗಳಿಗೆ ಕಾರಣವಾಗುತ್ತದೆ  ಸಾಲು

ಜತೆಯಲ್ಲಿದ್ದ ಅವಳು ಅದೇಕೆ ಹಿಂದೆ ಬಿದ್ದಳುಅವನೇಕೆ ಮುಂದೆ ಹೋದಅವಳನ್ನ ಮೀರಿದ ಅಂತ ತುರ್ತು ಅವನಿಗೇನಿತ್ತುಅವಳು ಸುಸ್ತಾದಳಾಅವನೊಂದಿಗೆ ನಡೆಯದಾದಳಾ ಎನ್ನಿಸಿಅವನಿಗೆ ತಿಳಿಯದ ಅವಳು ಹಿಂದೆ ಬಿದ್ದ ಕಾರಣವ ಹುಡುಕತೊಡಗುತ್ತೇವೆಹಿಂದೆ ಬಿದ್ದರೆ ಅವ ಮತ್ತೆ ಹಿಂದೆ ಬಂದಾನು ಎನ್ನುವ ನಿರೀಕ್ಷೆಯಾಅವ ಹಿಂತಿರುಗಿ ಅವಳ ಕೈ ಹಿಡಿದು ಮತ್ತೆ ಜೊತೆಗೆ ಕರೆದೊಯ್ದಾನು ಎನ್ನುವ ಆಸೆಯಾಹಿಂದೆ ಉಳಿದು ಅವನ ಗಮನವ ತನ್ನೆಡೆಗೆ ತಿರುಗಿಸಿಕೊಳ್ಳುವ ತನ್ನಿರುವ ನೆನಪಿಸುವ ತಿಳಿಯಪಡಿಸುವ ತುಡಿತವಾ ಯಾವುದಿರಬಹುದು ಅವಳು ಹಿಂದೆ ಬೀಳಲು ಕಾರಣ

ಮಲ್ಲಿಗೆಯನೆ ಮುಡಿದ ನೀನು ಉಟ್ಟ ಸೀರೆ ಬಿಳಿಯದು ಎನ್ನುವಲ್ಲಿ ಖುಷಿಯನ್ನೂ ವಿಷಾದವನ್ನೂ ಒಂದೇ ಸಾಲಲ್ಲಿ ಹಿಡಿದಿಟ್ಟಂತೆ ಭಾಸವಾಗುತ್ತದೆಇದು ನಕ್ಕ ಹಾಗೆ ನಟಿಸಬೇಡ ಎನ್ನುವ ಸಾಲಿಗೆ ಕನೆಕ್ಟಿವಿಟಿಯನ್ನು ಕೊಡುತ್ತಿರುವಂತೆ ಅನಿಸುತ್ತದೆಮಲ್ಲಿಗೆ ಮುಡಿಯುವುದು ಸಂತಸ ಸಂಭ್ರಮದ ಸೂಚಕಬಿಳಿಯ ಸೀರೆ ವಿಷಾದ ವೈಧವ್ಯದ ಸೂಚಕವೂ ಆಗಬಹುದುಅಲ್ಲಿಗೆ ಮನದಲ್ಲಿ ಪ್ರೇಮಭಾವಕ್ಕೆ ವೈಧವ್ಯದ ಸೂತಕವಾಹಾಗಾಗೇ ನಗುವ ನಟನೆ ಅನಿವಾರ್ಯವಾವಿಷಾದವನ್ನ ಮುಚ್ಚಿಡಲುತೋರಿಕೆಗಾಗಿ ಮಲ್ಲಿಗೆಯ ಮುಡಿವ ಸಂಭ್ರಮದ ನಟನೆಯಾ ಎಂದೆಲ್ಲ ಅನ್ನಿಸಿಪೂರ್ಣ ಕವನ ಇದೇ ಸಾಲುಗಳಲ್ಲಿ ಅಡಗಿದೆಯೇನೋ ಅನ್ನುವಂತೆ ಕಾಡತೊಡಗುತ್ತದೆ

ಬಿದಿರ ಮೆಳೆಯ ಬಂಗಾರದ ಸೀಮೆಯಾಚೆಗೇನಿದೆ?
ಕೊಳಲ ದನಿಯ ಉಂಗುರಗಳ ಸಂಜೆ ಹಾಡು ಹಬ್ಬಿದೆ.

ಎನ್ನುವಲ್ಲಿಮುಂದಿನ ಬದುಕಿನ ಪ್ರಶ್ನೆಯನ್ನ ಮುಂದಿಟ್ಟು ಉತ್ತರವಾಗುತ್ತಾನೆಅವರ ಚಲನೆ ಬಂಗಾರದ ಸೀಮೆಯಾಚೆಗಾಅಲ್ಲಿ ಹೋಗುವ ಪಯಣದಲ್ಲಿ ಅವಳು ಹಿಂದೆ ಬಿದ್ದಳಾಅಲ್ಲಿ ಯಾಕೆ ಹೋಗಬೇಕುಅಲ್ಲಿ ಏನಿದೆ ಎಂದು ಕೇಳುತ್ತಲೆ ಕೊಳಲ ದನಿಗಳ ಸಂಜೆ ಹಾಡು ಕೇಳುವ ಸಲುವಾಗಿ ಎನ್ನುವ ಉತ್ತರವನ್ನೂ ಆತನೇ ನೀಡುತ್ತಾನೆಸಂಜೆ ಹಾಡು ಎನ್ನುವುದು ಬದುಕಿನ ಇಳಿ ಸಂಜೆಯ ಕಾಲವೂ ಆಗಿರಬಹುದುನಿನಗೆ ನಾನು ನನಗೆ ನೀನು ಎನ್ನುವ ಆಸರೆ ಬಯಸುವ ಬದುಕ ಮುಸ್ಸಂಜೆಯಲ್ಲಿ ನಟನೆಯಿಂದ ಸಹಜತೆಗೆ ಅವಳನ್ನ ತರುವ ಪ್ರಯತ್ನದಲ್ಲಿ ಅವನಿದ್ದಾನಾ.  
 ಬಾ ಹತ್ತಿರಬೆರಳ ಹಿಡಿದುಮುಂದೆ ಸಾಗು ಸುಮ್ಮನೆ.
ನಕ್ಕುಬಿಡುನೋಡುತ್ತಿದೆ ಲೋಕವೆಲ್ಲ ನಮ್ಮನೆ.

ಇದುವರೆಗೆ ಅವಳಿಗೆ ಹಾರೈಕೆಯನ್ನೂಹಿಂದಿನ ನೆನಪುಗಳನ್ನು ಭವಿಷ್ಯದ ನಿರೀಕ್ಷೆಗಳನ್ನೆಲ್ಲ ಹೇಳುತ್ತ ಬಂದ ಅವ ಇಲ್ಲಿ ಅವಳಿಗೆ ಸೋತವನಂತೆ ಮಾತಾಡುತ್ತಾನೆಬಾ ಹತ್ತಿರ ಎಂದು ಕರೆಯುತ್ತಾನೆಅವ ಹಿಂದೆ ಹೋಗಿ ಅವಳನ್ನ ಕೈ ಹಿಡಿದು ತರಲಾರನಾಕಳೆದ ಕಾಲದಲ್ಲಿ ಯಾರೂ ಹಿಂದಿರುಗಿ ಹೋಗಲಾರರೇನೋದೂರ ಸಾಕು ಹತ್ತಿರವಾಗುವ ಎನ್ನುತ್ತಾನೆಇದುವರೆಗೆ ನಾ ಮುನ್ನಡೆದೆನಿ ಹಿಂದೆ ಬಿದ್ದೆಇನ್ನು ಸಾಕುನೀನೇ ಬೆರಳು ಹಿಡಿದು ಮುನ್ನಡೆಸು ಎನ್ನುತ್ತಾನೆಅವಳಲ್ಲಿ ಮತ್ತೆ ಸಹಜತೆ ಹುಟ್ಟದಿದ್ದರೂ ಅವಳಾದರೂ ಜೊತೆಗಿರಲಿ ಎನ್ನುವ ಹಂತಕ್ಕೆ ತಲಪುತ್ತಾನೆನಕ್ಕ ಹಾಗೆ ನಟಿಸಬೇಡ ಎಂದವನೇ ಲೋಕವೆಲ್ಲ ನಮ್ಮನ್ನ ನೋಡುತ್ತಿದೆ ಅದಕ್ಕಾದರೂ ನಕ್ಕು ಬಿಡು ಎನ್ನುವಲ್ಲಿಗೆ ಮತ್ತೆ ನಟನೆಯನ್ನಾದರೂ ಒಪ್ಪುವ ಹಂತಕ್ಕೆ ಬರುತ್ತಾನೆಅವಳನ್ನ ಒಲಸಿಕೊಳ್ಳಲಾಗದ ಅಸಹಾಯಕತೆಯಾಗಿ ಕಾಣುವ  ಸಾಲು ಅವನ ಇದುವರೆಗಿನ ಪ್ರಯತ್ನವೆಲ್ಲ ಲೋಕ ನೋಡುತ್ತಿದೆ ಎನ್ನುವುದಕ್ಕಾಗಿಯೂ ಇರಬಹುದಾ ಎನ್ನಿಸುವಂತೆಯೂ ಮಾಡಿ ಮತ್ತೆ ಮೊದಲೊನಿಂದ ಕವನವನ್ನ ಓದುವಂತೆ ಮಾಡುತ್ತದೆ ಎನ್ನುವಲ್ಲಿಗೆ ಕವನ ಕೊನೆಯಾಗುತ್ತದೆ.
 * * * * * * *

 ಕವನವೊಂದು ತನ್ನ ಸಾಲುಗಳ ಮೂಲಕ ಬಿಡಿಬಿಡಿಯಾಗಿ ಧಕ್ಕುವುದೇ ಬೇರೆಪೂರ್ಣವಾಗಿ ಸಮಗ್ರವಾಗಿ ಧಕ್ಕುವುದೇ ಬೇರೆಇದುವರೆಗೆ ಬಿಡಿ ಸಾಲುಗಳಲ್ಲಿ ಏನೆಲ್ಲ ಹುಡುಕಿದ್ದೆವಲ್ಲ ಅದೆಲ್ಲ ಪೂರ್ಣತೆಯಲ್ಲಿ ಸರಳವಾಗಿ ಗೋಚರಿಸುತ್ತದೆಕವನದೊಳಗೊಂದು ಕಥೆ ಸೇರಿ ಕಥನ ಕವನವಾಗಿ ನಮಗೆ ಕಾಣುತ್ತದೆಕಥೆ ಇಷ್ಟೆಅವಳು ಅವನು ಹತ್ತಿರದ ಎತ್ತರದ ಮನೆಗಳಲ್ಲಿ ಬೆಳೆದವರುಅಲ್ಲೆ ಎಲ್ಲೋ ಬೆಟ್ಟದಾಚೆಯ ಬಯಲಿನಲ್ಲಿ ಹಸುಗಳ ನಡುವಿನಲ್ಲಿ ಪ್ರೇಮ ಮೊಳೆತಿದೆಜೊತೆ ನಡೆದಿದ್ದಾರೆಜೊತೆ ನಡೆವ ಪಯಣದಲ್ಲಿ ಅವಳು ಹಿಂದೆ ಬಿದ್ದು ಅವ ಮುಂದೆ ನಡೆದಿದ್ದಾನೆ ಹಿನ್ನಡೆ ಅವಳ ಸಹಜತೆಯನ್ನ ಕಳೆದಿದೆಅದು ಅವನಿಗೆ ಅರ್ಥವಾಗುವಷ್ಟರಲ್ಲಿ ಅವಳು ಸಹಜತೆಗೆ ಮರಳಲಾಗದಷ್ಟು ಹಿಂದೆ ಉಳಿದಿರುವುದು ಗೊತ್ತಾಗಿದೆಅವಳಿಗೆ ಹಾರೈಸುತ್ತಾನೆಅನುನಯಿಸುತ್ತಾನೆಊಹೂಂ ಅವಳು ಸಹಜತೆಗೆ ಮರಳಲಾರಳುಕೊನೆಗೆ ನೋಡುವ ಲೋಕದ ಕಾರಣಕ್ಕಾದರೂ ಜೊತೆ ನಡೆಯೋಣ ಎನ್ನುವಲ್ಲಿಗೆ ಕಥೆ ಅಂತ್ಯವಾಗುತ್ತದೆ.

ಇದು ಪ್ರೇಮ ಗೀತೆಯೂ ಅಗಬಹುದುದಾಂಪತ್ಯ ಗೀತೆಯೂಆರಂಭದ ದಿನಗಳಲ್ಲಿ ಅವಳಿಗೆ ಅವನು ಅವನಿಗೆ ಅವಳು ಎನ್ನುವ ಪ್ರೇಮದ ಕಾಲಒಮ್ಮೆ ಜೊತೆಯಾದೆವು ಎನ್ನಿಸಿದಾಗ ಪ್ರಾಮುಖ್ಯತೆ ಬದಲಾಗುತ್ತದೆಜೊತೆಯಾಗುವವರೆಗೆ ಪರಸ್ಪರ ಪ್ರಾಮುಖ್ಯತೆ ಅವಳನ್ನ ಗೆಲ್ಲುವ ಹಪಹಪಿಗೆದ್ದು ಜೊತೆಯಾದ ಮೇಲೆ ಭವಿತವ್ಯ ಕಾಡತೊಡಗುತ್ತದೆಪುರುಷ ಮುಂದಿನ ಬದುಕಿನ ಸುಖಕ್ಕಾಗಿ ಅವಳನ್ನ ಬಿಟ್ಟು ಮುನ್ನಡೆಯುತ್ತಾನೆಮುಂದಿನ ಸುಖದ ದಿನಗಳ ನಿರ್ಮಾಣ ಮಾಡುವಷ್ಟರಲ್ಲಿ ವೃದ್ದಾಪ್ಯ ಎದುರು ನಿಂತಿರುತ್ತದೆಆಗ ಮತ್ತೆ ಆಸರೆ ಬೇಕುಅವಳನ್ನ ಹುಡುಕಿದರೆ ಅವಳು ಹಿಂದೆಯೇ ಉಳಿದುಬಿಟ್ಟಿದ್ದಾಳೆಅವನಿಗೆ ತಪ್ಪೆಲ್ಲಿ ಆಗಿದೆ ಎಂದು ಗೊತ್ತಾಗುವಷ್ಟರಲ್ಲಿ ಸರಿ ಮಾಡಲಾಗದಷ್ಟು ದೂರ ನಡೆದಾಗಿರುತ್ತದೆಹತ್ತಿರವಿದ್ದ ಭಾವಗಳು ಕಳೆದಿರುತ್ತವೆಆದರೆ  ಹಂತದಲ್ಲಿ ಆಯ್ಕೆಯಿಲ್ಲಪರಸ್ಪರ ಆಸರೆ ಬೇಕುಜೊತೆ ನಡೆಯಲೇ ಬೇಕುಅದಕ್ಕಾಗಿ ಸರಿ ಮಾಡುವ ಒಂದು ಪ್ರಯತ್ನಗೆದ್ದರೆ ಬದುಕು ಸುಂದರಅಂತರಂಗಕ್ಕೆ ಬಹಿರಂಗದ ಆಸರೆಇಲ್ಲದಿದ್ದರೆ ಲೋಕದ ಕಣ್ಣಿಗಾಗಿ ನಟನೆಅಂತರಂಗಕ್ಕೆ ಹಳೆಯ ನೆನಪು ಅಷ್ಟೆ.

 ಕವನದಲ್ಲಿ ಅವಳು ನಮಗೆ ಅಗೋಚರ ಪಾತ್ರ ಮಾತ್ರಅವನು ಏನು ಹೇಳುತ್ತಿದ್ದಾನೆ ಎನ್ನುವುದರ ಮೇಲೆ ಅವಳ ಚಿತ್ರಣ ನಮ್ಮಲ್ಲಿ.‘ಜತೆಯಲಿದ್ದು ನೀನದೇಕೆ ಹಿಂದೆ ಬಿದ್ದೆ’ ಎನ್ನುವಲ್ಲಿ ಅವಳ ನಕ್ಕ ಹಾಗೆ ನಟಿಸುವ ಕಾರಣವನ್ನ ನಾವು ಹುಡುಕಿಕೊಳ್ಳಬೇಕುಅದರಾಚೆಗೂ ಕಾರಣವಿರಬಹುದುಅವ ಹೇಳುವುದಿಲ್ಲಇದು ಅವನ ಅನಿಸಿಕೆ ಮಾತ್ರ ಇರಲೂಬಹುದುಅವಳ ನೋವು ಬೇರೆಯೇ ಇರಬಹುದುಅದು ಅವನಿಗೆ ಅರ್ಥವಾಗದಿರುವುದಕ್ಕೂ ಅವಳಿಗೆ ವಿಷಾದವಿರಬಹುದು

ಇಲ್ಲಿಯೂ ಅವ ತಾನು ಮುನ್ನಡೆದೆ ಎನ್ನುವುದಿಲ್ಲನೀನು ಹಿಂದೆ ಬಿದ್ದೆ ಎನ್ನುತ್ತಾನೆಅವಳ್ಯಾಕೆ ಹಿಂದೆ ಬಿದ್ದಳುಅವ ಕಾರಣ ಹುಡುಕುವುದಿಲ್ಲತನ್ನದೆ ಸರಿ ಎನ್ನುವ ಸಣ್ಣ ಅಹಂಕಾರ ಅವನಿಗೆ ಇರಲೂಬಹುದುಅವನೆ ಅವಳನ್ನ ಹಿಂದೆ ಬಿಟ್ಟಿರಲೂಬಹುದುಇದ್ಯಾವುದನ್ನು ಅವ ಹೇಳ ಹೋಗುವುದಿಲ್ಲ.‘ನೀನೆಲ್ಲು ನಿಲ್ಲಬೇಡಹೆಜ್ಜೆ ಹಾಕು ಬೆಳಕಿಗೆ’ ಎನ್ನುವಾಗಲೂ ಅವನಿಗೆ ತಾನು ಬೆಳಕಲ್ಲಿದ್ದೇನೆನೀನೂ ಬೆಳಕಿಗೆ ಚಲಿಸು ಎನ್ನುವ ಭಾವಅವಳಿರುವಲ್ಲೂ ಬೆಳಕಿರಬಹುದಾಇವನೆ ಕತ್ತಲಲ್ಲಿರಬಹುದಾ ಇವಾವುದು ಇಲ್ಲಿ ವ್ಯಕ್ತವಾಗುವುದಿಲ್ಲಇಲ್ಲಿ ಸರಿ ಎನ್ನುವುದು ಅವನದು ಮಾತ್ರ ಎನಿಸುತ್ತದೆಅವಳು ನಮಗೆ ಅವನ ಕಣ್ಣಿಂದ ಮಾತ್ರ ಕಾಣುತ್ತಾಳೆ ಅಷ್ಟೆ.

 * * * * * * *

 ಬರೆದ ಮೇಲೆ ಕವನವೆನ್ನುವುದು ಕವಿಯದಲ್ಲಓದುಗನದುಕವಿ ಏನನ್ನೇ ಹೇಳ ಹೊರಟರೂ ಓದುಗ ಅದನ್ನ ತನ್ನ ಮನಸ್ಥಿತಿಯೊಂದಿಗೆ ಮಾತ್ರ ಅರ್ಥ ಮಾಡಿಕೊಳ್ಳುತ್ತಾನೆಅದರಲ್ಲಿ ಕವಿ ಹೇಳ ಹೊರಟಿರುವುದೂ ಇರಬಹುದುಇಲ್ಲದೆಯೂ ಇರಬಹುದುಬರೆದ ನಂತರ ಕವಿ ಕೂಡ ಅವನ ಕವನದ ಓದುಗನೇ ಆಗುತ್ತಾನೆಬರೆವಾಗಿನ ಭಾವದ ಆಚೆಗೂ ಅವನ ಕವನ ಅವನಿಗೆ ಕಾಣಲೂಬಹುದುಬರೆವಾಗಿನ ತಾಧ್ಯಾತ್ಮವೇ ಬೇರೆಓದುವಾಗಿನ ಹೊಳಹುಗಳೇ ಬೇರೆ ಆಗಲೂಬಹುದುಕವಿಯು ಹೇಳಲಿಕ್ಕಿರುವುದೊಂದು ನನ್ನ ಅರ್ಥೈಸುವಿಕೆ ಇನ್ನೊಂದು ಆಗುವ ಎಲ್ಲ ಸಾಧ್ಯತೆಯನ್ನು ಗಮನಿಸುತ್ತಲೇ ಕೆ ಎಸ್ ನರಸಿಂಹಸ್ವಾಮಿಯವರ ‘ನಕ್ಕು ಬಿಡು’ ಕವನದೊಳಗೆ ನನ್ನನ್ನ ಕಳೆದುಕೊಂಡು ಹುಡುಕಿಕೊಳ್ಳುತ್ತಲಿದ್ದೇನೆ

 ಹುಡುಕಾಟದಲ್ಲಿ ಇಣುಕಿದ ಭಾವಗಳ ನಿಮ್ಮೆದುರು ಹರವಿ ಕೂತಾಗ ಮತ್ತೇನೋ ಧಕ್ಕೀತು ನನಗೆ ಎನ್ನುವ ನಂಬಿಕೆಕೆಎಸ್ಎನ್ ಬಹುತೇಕ ಕವನಗಳಲ್ಲಿ ಬರುವಂತೆ ಇಲ್ಲಿಯೂ ಹಸಿರುಬಿಳಿಕಂದು ಎನ್ನುವ ಬಣ್ಣಗಳುಮಲ್ಲಿಗೆಬೆಳದಿಂಗಳುತಾರೆಹಸುಕರು ಎನ್ನುವ ರೂಪಕಗಳುಸರಳವಾಗಿ ಓದಿಸಿಕೊಂಡು ಹೋಗುವ ಸಾಲುಗಳು ಇವುಗಳ ಬಗ್ಗೆ ಎಲ್ಲ ಮಾತನಾಡದೆ ಕೆಎಸ್ಎಸ್ ಇತರ ಕವನಗಳೊಂದಿಗೆ  ಕವನದ ಸಾಮ್ಯತೆ ಹೋಲಿಕೆ ಇದಾವುದನ್ನೂ ಮಾಡದೆ  ಕವನವೊಂದನ್ನೇ ಬಿಡಿ ಬಿಡಿಯಾಗಿ ನೋಡಿ ಹೀಗೆಲ್ಲ ಬರಹವಾಗಿದ್ದೇನೆ

ಹೀಗೆ ಕಾಣುತ್ತ ಹೋದರೆ ಇನ್ನೂ ಏನೇನೋ ಕಂಡೀತು  ಕವನದ ಸಾಲುಗಳಲ್ಲಿಕಾಣ್ಕೆಗೆ ಮಿತಿಯಿರಬಾರದು ಆದರೆ  ಬರಹಕ್ಕೆ ಇಷ್ಟು ಸಾಕು ಅಲ್ಲವೆತುಂಬ ವಾಚ್ಯವೆನಿಸಿದರೂ ಇಷ್ಟು ಹೇಳದೆ ಉಳಿಯದಾದೆ ಎನ್ನುತ್ತಅವಳು ಹತ್ತಿರ ಬಂದಳಾಕೈ ಹಿಡಿದು ನಡೆದಳಾಸಂಜೆ ಹಾಡು ಕೊಳಲ ದನಿಯ ಉಂಗುರವಾಯಿತಾಲೋಕದ ಕಾಣ್ಕೆಯಾಚೆಗೂ ನಗು ಮೂಡಿತಾ ಎಂದೆಲ್ಲ ಸಂದೇಹಗಳನ್ನ ಮುಗಿದ ನಂತರವೂ ಹುಟ್ಟುಹಾಕಿಕೊಳ್ಳುತ್ತ ಕವನ ಎನ್ನುವುದು ಕಥನವಾಗಿ ಮುಂದುವರೆಯುತ್ತಲೇ ಹೋಗುತ್ತಿದೆ ನನ್ನೊಳಗೆಬಹುಶಃ ನಿಮ್ಮೊಳಗೂಒಳಗೊಂದು ಜೀವಭಾವ ತುಡಿಸುವ ಕೆಎಸ್ಎನ್ ನೆನಪಿಗೆ ಇದೊಂದು ನುಡಿ ಮಲ್ಲಿಗೆ ಅಷ್ಟೆ.

* * * * * * *

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನದ ಶತಮಾನೋತ್ಸವದ ಆಚರಣೆಯ ಸಂಭ್ರಮದ ಭಾಗವಾಗಿಅವರ ಕವನಗಳ ಹೊಸ ಓದು 'ಹೂ ಬುಟ್ಟಿ' ಎನ್ನುವ ಪುಸ್ತಕ ಬಿಡುಗಡೆಯಾಯಿತು. ಪುಸ್ತಕಕ್ಕಾಗಿ 'ದುಂಡು ಮಲ್ಲಿಗೆ' ಕವನ ಸಂಕಲನದಿಂದ ಆಯ್ದ 'ನಕ್ಕು ಬಿಡು' ಕವನದ ಬಗ್ಗೆ ನಾನು ಬರೆದಿದ್ದ ಬರಹ ಇದು.

ಇದೇ ಬರಹವನ್ನು ದಿನಾಂಕ:06.02.2015ರಂದು 'ಅವಧಿ'ಯಲ್ಲಿ ಪ್ರಕಟಿಸಲಾಗಿದೆ.