ದೇವಾಮೃತ ಗಂಗೆ//ರಘುನಂದನ ಕೆ.

ನನ್ನ ಮೇಲಾಕೆಗೆ ಮುನಿಸೂ ಇರಲಿಲ್ಲ
ಆದರೂ ಹೋದಳು ನನ್ನವಳು ನನ್ನ ತೊರೆದು
ನೆನಪುಗಳ ಜಾತ್ರೆಯ ತೇರನೆಳೆದು
ಮನೆಯಂಗಳದ ಮಲ್ಲಿಗೆಯೂ ಬಾಡಿದೆ
ಮನೆಯೊಡತಿಯ ಮುಂಗುರುಳ ಕಾಣದೆ
ಹರಡಿ ಹೋಗಿದೆ ಅಂಗಳದ ರಂಗೋಲಿ
ಅವಳಿಲ್ಲದ ಮನೆ ಮನವೆಲ್ಲ ಖಾಲಿ
ಹರಡಿ ಹೋಗಿದೆ ಅಂಗಳದ ರಂಗೋಲಿ
ಅವಳಿಲ್ಲದ ಮನೆ ಮನವೆಲ್ಲ ಖಾಲಿ
ಮಲ್ಲಿಗೆಯ ಕಂಪ ಮನೆಗೆ ತಂದವಳು
ಬಂದೆಲ್ಲ ದುಃಖಗಳ ನುಂಗಿ
ದೀಪ ಹಚ್ಚಿಟ್ಟು ಕದ ತೆರೆದು ಹೋದಾಕೆ
ಬಂದೆಲ್ಲ ದುಃಖಗಳ ನುಂಗಿ
ದೀಪ ಹಚ್ಚಿಟ್ಟು ಕದ ತೆರೆದು ಹೋದಾಕೆ
ರೆಕ್ಕೆ ಬಲಿತ ಹಕ್ಕಿಯಂತೆ ಮಕ್ಕಳು

ನಿಟ್ಟುಸಿರಿಟ್ಟು ಯೌವ್ವನವ ನೆನೆದು
ನನ್ನ ಬಾಯಿಗೆ ತಾಂಬೂಲವಿಟ್ಟು ನಕ್ಕಾಕೆ
ಸದ್ದಿಲ್ಲದೆ ನಡೆದು ಹೋದಳು ತೊರೆದು
ಮತ್ತೆ ಹಿಂದಿರುಗಿ ಬರಲಾರದೂರಿಗೆ
ಅವ ಬಂದು ಕೈ ಬೀಸಿ ಕರೆದಾಗ
ಭವ ತೊರೆದು ಹೋಗದಿರಲು ಸಾಧ್ಯವೇ??
ಅವ ಬಂದು ಕೈ ಬೀಸಿ ಕರೆದಾಗ
ಭವ ತೊರೆದು ಹೋಗದಿರಲು ಸಾಧ್ಯವೇ??
ಕಳೆದ ಕ್ಷಣಗಳ ರಾಯಭಾರದ ತೇರಲಿ
ಮುಗಿಲ ತಾರೆಯೊಳು ಅವಳ ಕಾಣುವೆ
ಮತ್ತೆ ಸೇರಲು ಕಾಯುವೆ.
ಮುಗಿಲ ತಾರೆಯೊಳು ಅವಳ ಕಾಣುವೆ
ಮತ್ತೆ ಸೇರಲು ಕಾಯುವೆ.
* * * * * * * * *
2005 ರಲ್ಲಿ ಬರೆದ ಕವನವಿದು. ಕೆ ಎಸ್ ನರಸಿಂಹಸ್ವಾಮಿ ಯವರ ಭಾವಗೀತೆಗಳನ್ನ ಅಶ್ವಥ್ ಗೀತ ಸಂಯೋಜನೆಯಲ್ಲಿ ಕೇಳುತ್ತ, ಸಂಜೆಯಾಗಸವ ನೋಡುತ್ತ - ಮನೋಮಂದಿರದಲ್ಲರಳುವ ಅಕ್ಷರಗಳ ಭಾವ ಮಾಲೆಗೆ ಪುಳಕಗೊಳ್ಳುತ್ತಿದ್ದ ಕಾಲ. ಒಂದಷ್ಟು ಭಾವಗಳು ಆಗಾಗ್ಗೆ ಹಾಳೆಗಳ ಮೇಲೆ ಮೂಡಿ ಅವಿತು ಕುಳಿತಿದ್ದವು. ಈಗ ಈ ಭಾವಗಳ ಪಾತರಗಿತ್ತಿಗೆ ಜೀವ ಬಂದು ರೆಕ್ಕೆ ಬಿಚ್ಚಿ ಹಾರುವ ಪುಳಕ..
ಚಿತ್ರಕೃಪೆ : ಅಂತರ್ಜಾಲ
ಚೆನ್ನಾಗಿದೆ....ಸುಂದರ ಕವನ...
ReplyDeleteಗಂಡನ ತಳಮಳ, ಹೆಂಡತಿಯನ್ನು ನೆನೆಯುವ ಪರಿ ಅದ್ಭುತ...