ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Tuesday 14 May 2019

ಗೆಲ್ಲುವ, ಗೆಲ್ಲಿಸುವ ದಾರಿಯ ಅನ್ವೇಷಣೆ



- ರಘುನಂದನ ಕೆ. ಹೆಗಡೆ
SKILL, SPEED, SCORE – 01

ನಮ್ಮೂರ ಯಂಕ್ಟ ಅದ್ಭುತ ಮಾತುಗಾರಏನನ್ನೇ ಕೊಟ್ಟರೂ ಮಾರಾಟ ಮಾಡಬಲ್ಲಎಲ್ಲಿ ಬೇಕಾದರೂ ಬದುಕಬಲ್ಲಯಾವ ವಿಷಯದ ಬಗ್ಗೆ ಬೇಕಾದರೂ ಮಾತಾಡಬಲ್ಲರಿಸೆಶ್ಶನ್ಷೇರು ಮಾರುಕಟ್ಟೆಯಿಂದ ರಸಗೊಬ್ಬರಮಣ್ಣಿನ ಫಲವತ್ತತೆಯವರೆಗೆ ಎಲ್ಲ ವಿಷಯಗಳೂ ಅವನಿಗೆ ಗೊತ್ತುಜನರನ್ನ ಸೆಳೆಯುವುದುಸಂವಹನ ಮಾಡುವುದುಯಾವುದೇ ವಿಷಯದ ಬಗ್ಗೆ ಮಾತಾಡುವುದು ಇದರಲ್ಲಿ ಅವನು ತುಂಬಾ ನಿಪುಣಆದರೇನುಕಳೆದ ೨೦ ವರ್ಷಗಳಿಂದಲೂ ಅವನು ಸೇಲ್ಸ್ಮನ್ ಆಗಿಯೇ ದುಡಿಯುತ್ತಿದ್ದಾನೆ.
ನಮ್ಮೂರ ಬಡ ಮೇಷ್ಟ್ರ ಮಗ ತುಂಬಾ ಬುದ್ದಿವಂತನಾವೆಲ್ಲ ಕಂಪ್ಯೂಟರ್ ಎಂದರೇನು ಎಂದು ತಿಳಿಯುವ ಹೊತ್ತಿಗಾಗಲೇ ಅವನು ಕಂಪ್ಯೂಟರ್ ಲಾಂಗ್ವೇಜ್ಗಳ ಬಗ್ಗೆ ಮಾತಾಡುತ್ತಿದ್ದನಾವೆಲ್ಲಾ ಹಾಯಾಗಿ ಅಪ್ಪ ಕೊಟ್ಟ ಪಾಕೇಟ್ ಮನಿಯಲ್ಲಿ ಶೇಂಗಾ ತಿನ್ನುತ್ತಿದ್ದರೆಅವನು ಪೇಪರ್ ಹಾಕಿ ಬಂದ ದುಡ್ಡಿನಲ್ಲಿ ಹೆನ್ರಿ ಫೋರ್ಡ್ ಬಯಾಗ್ರಫಿ  ಖರೀದಿಸುತ್ತಿದ್ದನಾವು ಡಿಗ್ರಿ ಓದುವುದು ಯಾವ ಕಾಲೇಜಿನಲ್ಲಿ ಎಂದು ಯೋಚಿಸುತ್ತಿದ್ದರೆ ಅವನಾಗಲೇ ಪಾರ್ಟ್ ಟೈಮ್ ಬಿಜ್ನೆಸ್ ಶುರು ಮಾಡುವುದಾ ಇಲ್ಲಾ ಕೆಲಸ ಮಾಡುವುದಾ ಎಂದು ಯೋಜನೆ ರೂಪಿಸುತ್ತಿದ್ದಈಗಾ ನಾವೆಲ್ಲ ಬೆಳಿಗ್ಗೆ ಕಛೇರಿಗೆ ಹೋಗಿ ಸಂಜೆ ಸುಸ್ತಾಗಿ ಮನೆಗೆ ಹಿಂತಿರುಗುತ್ತಾಮಾಸಾಂತ್ಯದ ಖಾಲಿ ಬ್ಯಾಂಕ್ ಅಕೌಂಟ್ ಶಪಿಸುತ್ತಾ ಇದ್ದರೆ ಅವನಾಗಲೇ ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾನೆ.
ಎಲ್ಲಾ ಕ್ಲಾಸುಗಳಲ್ಲಿತರಬೇತಿಗಳಲ್ಲಿ ನಾವೆಲ್ಲಾ ಪದೇ ಪದೇ ಕೇಳುತ್ತೇವೆಇದು ಸ್ಪರ್ಧಾತ್ಮಕ ಯುಗಇಲ್ಲಿ ತಿಳಿದಷ್ಟು ಕಡಿಮೆಗೆಲ್ಲುವುದಾದರೆ ಓದಬೇಕುಓಡಬೇಕು ಇತ್ಯಾದಿ ಇತ್ಯಾದಿಓದಿದವರು ಓಡಿದವರು ಎಲ್ಲಾ ಗೆದ್ದಿದ್ದಾರಾ..? ಓದಿದ ನಾವೆಲ್ಲಾ ಏನಾಗಿದ್ದೇವೆಓದದ ಅವರೆಲ್ಲಾ ಏನಾಗಿದ್ದಾರೆ..?? ಶಾಲೆಯಿಂದ ಹೊರಹಾಕಲ್ಪಟ್ಟವರು ದೇಶದ ಆರ್ಥಿಕತೆಗೆ ಬೆನ್ನೆಲಬಾಗುವಂತ ಉದ್ಯಮವನ್ನ ಸ್ಥಾಪಿಸಿದ್ದಾರೆಓದಲು ನಾಲಾಯಕ್ಕು ಎನಿಸಿಕೊಂಡವರು ದೊಡ್ಡ ವಿಜ್ಞಾನಿಯಾಗಿದ್ದಾರೆವೇಗವಾಗಿ ಓಡಿದ ಸತ್ಯಂ ಕಂಪ್ಯೂಟರ್ಸ್ ಏನಾಯ್ತು ಎನ್ನುವುದು ನಮಗೆ ಗೊತ್ತಿದೆಓಡುತ್ತಿದ್ದ ಅಮೇರಿಕದ ಆರ್ಥಿಕತೆ ಕುಸಿದು ಬಿದ್ದಿದ್ದು ಕಣ್ಮುಂದೆಯೇ ಇದೆಹಾಗಾದರೆ ಗೆದ್ದಿದ್ದು ಯಾರು..?? ಗೆಲ್ಲಿಸಿದ್ದು ಯಾವುದು..??
ಯಂಕ್ಟ ಹಾಗೂ ಮೇಷ್ಟ್ರ ಮಗ ಇಬ್ಬರೂ ಬುದ್ದಿವಂತರುಜ್ಞಾನವನ್ನೂ  ಮೂಲಕ ವಿವಿಧ ಕೌಶಲ್ಯವನ್ನೂ ಗಳಿಸಿಕೊಂಡು ನಮ್ಮ ಅಚ್ಚರಿಗೆ ಕಾರಣರಾದವರುಹಾಗೆ ನೋಡಿದರೆ ಮೇಷ್ಟ್ರ ಮಗನಿಗಿಂತಲೂ ಹೆಚ್ಚು ವಿಷಯ ಯಂಕ್ಟನಿಗೆ ಗೊತ್ತುನಿಮಗೆ ಇಬ್ಬರೂ ಒಟ್ಟಿಗೆ ಸಿಕ್ಕರೆ ನೀವು ಯಂಕ್ಟನನ್ನೆ ಮೆಚ್ಚುತ್ತೀರಿಆದರೆ ಗೆಲುವಿನ ಆಯ್ಕೆಯಲ್ಲಿ ವ್ಯತ್ಯಾಸ ಆದದ್ದು ಹೇಗೆಯಂಕ್ಟನ ಸೋಲಿಗೂಮೇಷ್ಟ್ರ ಮಗನ ಗೆಲುವಿಗೂ ಕಾರಣ ಏನು?? ನಾವು ಸಾಮಾನ್ಯ ಜನ ಅದೃಷ್ಟ ಎಂದು ಬಿಡುತ್ತೇವೆಅಸಾಮರ್ಥ್ಯವನ್ನು ಮುಚ್ಚಿಕೊಳ್ಳೋಕೆ ಇನ್ನು ಚೆನ್ನಾಗಿರೋ ಶಬ್ದ ಇಲ್ವಲ್ಲಒಂದಿಷ್ಟು ಯೋಚನೆ ಮಾಡಿದರೆ ಮತ್ತೇನೋ ಸಿಗುತ್ತೆಸಿಕ್ಕವರುಸಿಕ್ಕಿದ್ದು ಅರ್ಥವಾದವರು ಗೆಲ್ತಾರೆ.
ನಮ್ಮ ಮೇಷ್ಟ್ರು ಹೇಳುತ್ತಿದ್ದರುಗೆಲ್ಲುವುದಕ್ಕೆ ಬೇಕಾಗಿರೋದು ಓದೊಂದೆ ಅಲ್ಲಕೌಶಲ್ಯವೂ ಬೇಕು ಅಂತಕೌಶಲ್ಯ ಬೇಕಿಲ್ಲ ಸ್ಪೀಡಾಗಿದ್ರೆ ಸಾಕು ಅಂತ ಹಿಂದಿನ ಪೀಳಿಗೆಯವರು ನಾವು ಅನ್ಕೊಂಡಿದ್ವಿಹಾಗಾಗೆ ನಾವೀಗ ಮಧ್ಯಮವರ್ಗದ ಕಷ್ಟಪಟ್ಟು ದುಡಿಯುವ ನೌಕರರುಇದಕ್ಕಿಂತ ಹೆಚ್ಚಾಗೋಕೆಇವತ್ತಿಗೆ ಕೌಶಲ್ಯವೊಂದೆ ಸಾಕಾಗೋದಿಲ್ಲ ಅಂತ ನಮ್ಮ ಮೇಷ್ಟ್ರಿಗೂ ಗೊತ್ತಾಗಿದೆಅವರದೇ ಮಗ ನಿರೂಪಿಸಿದ್ದಾನೆಜೊತೆಗೆ ಸ್ಪೀಡೂ ಬೇಕು ಅಂತಹಾಗಾದರೆ ಕೌಶಲ್ಯವೆಂದರೇನು..? ಯಾವಾಗ ವೇಗ ಗೆಲ್ಲಿಸುತ್ತದೆ..??
* * * * * * *
ಕೌಶಲ್ಯವೆಂದರೆ : ಇಂದಿನ ಪ್ರಪಂಚದಲ್ಲಿ ಮಾಹಿತಿ ಸರಾಗವಾಗಿ ಹರಿಯುತ್ತಿದೆಮಾಹಿತಿಯೆಂದರೆ ಜ್ಞಾನ ಅಲ್ಲವೇಕೈಯಲ್ಲಿನ ಮೊಬೈಲ್ಅಂತರ್ಜಾಲದಲ್ಲಿ ಎಲ್ಲ ಮಾಹಿತಿಯೂ ಕ್ಷಣ ಮಾತ್ರದಲ್ಲಿ ದೊರೆಯುತ್ತಿದೆಹಾಗಾಗೇ ಈಗ ಜ್ಞಾನಕ್ಕೆ ಮಹತ್ವ ಕಡಿಮೆಯಾಗಿ ಕೌಶಲ್ಯ ಎನ್ನುವುದು ಪದೇ ಪದೇ ಕೇಳುತ್ತಿದೆಜ್ಞಾನ ಸಂಪಾದನೆಯಿಂದ ಕೌಶಲ್ಯ ವೃದ್ಧಿಯ ಅನಿವಾರ್ಯತೆಯೆಡೆಗೆ ಆಧುನಿಕತೆ ನಮ್ಮನ್ನ ನೂಕಿದೆ ಅಂದಂತಾಯ್ತುಹಾಗಾದರೆ ಜ್ಞಾನ ಅಥವಾ ಮಾಹಿತಿ ಕೌಶಲ್ಯವಾಗುವ ಹಂತ ಯಾವುದುಸಂದರ್ಭಕ್ಕನುಸಾರವಾಗಿ ಅವರವರೇ ಅವರವರ ಕೌಶಲ್ಯ ಕಂಡುಕೊಳ್ಳಬೇಕೆನ್ನುವುದು ನಿಜವಾದರೂ ಇಲ್ಲೊಂದಿಷ್ಟು ಕೌಶಲ್ಯದ ಬಗ್ಗೆ ನೋಡೋಣ.
ಕೌಶಲ್ಯ ಬರಬೇಕೆಂದರೆ ಮೊದಲಿಗೆ ಜ್ಞಾನ ಬೇಕುಜ್ಞಾನ ಅಧ್ಯಯನದಿಂದ ಅನುಭವದಿಂದ ಬರುತ್ತದೆಜ್ಞಾನವೆಂದರೆ ವಿಷಯ ಸಂಗ್ರಹಕೌಶಲ್ಯವೆಂದರೆಅರಿತ ಜ್ಞಾನವನ್ನು ಹೇಗೆಎಲ್ಲಿ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವ ತಿಳುವಳಿಕೆಯಾವುದೇ ಕೆಲಸವನ್ನ ಅತ್ಯುತ್ತಮವಾಗಿ ಮಾಡಿ ಮುಗಿಸುವ ಸಾಮರ್ಥ್ಯಪರಿಣಿತಿಗೆ ಕೌಶಲ್ಯ ಎನ್ನುತ್ತಾರೆ ಎನ್ನುತ್ತದೆ ಶಬ್ದಕೋಶ. “ಜ್ಞಾನವೆಂದರೆ ಮುಂದೇನು ಮಾಡುವುದು ಎಂದು ತಿಳಿಯುವುದುಕೌಶಲ್ಯವೆಂದರೆ ಅದನ್ನು ಹೇಗೆ ಮಾಡುವುದು ಎಂದು ತಿಳಿಯುವುದುಸದ್ಗುಣವೆಂದರೆ ಅದನ್ನು ಕಾರ್ಯಗತಗೊಳಿಸುವುದು” ಎಂದಿದ್ದಾರೆ ಡೇವಿಡ್ ಸ್ಟಾರ್ ಜಾರ್ಡನ್
ಕೌಶಲ್ಯ ಹೇಗೆಲ್ಲ ಬದಲಾಗುತ್ತ ಬಂದಿದೆಕೌಶಲ್ಯದ ವಿಧಗಳು ಯಾವುವು ಎನ್ನುವುದನ್ನ ಮುಂದಿನ ವಾರ ನೋಡೋಣ.

No comments:

Post a Comment

ನಿಮ್ಮ ಅನಿಸಿಕೆ