ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday 31 October 2011

ಹೀಗೊಂದು ಹಬ್ಬ


ದೇವಾಮೃತ ಗಂಗೆ//ರಘುನಂದನ ಕೆ.


ಮುಗಿಲೆತ್ತರ ಚಿಮ್ಮಿ ಸಿಡಿವ
ಬೆಳಕ ಗೋಳದ ಹೊಳಪು
ಅಂಗೈ ತುದಿಯ ಕಿಡಿಯಲ್ಲಿ
ಆಕಾಶ ಬೆಳಗುವ ಥಳುಕು
ಬಡ ಗುಡಿಲಸಲ ಕಂದನಿಗೆ
ಅವಕಾಶವಿಲ್ಲದೆಯೂ ಹಂಬಲ
ಸುಡಲೂ, ಬೆಳಗಲೂ;
ಗುರಿ ತಪ್ಪಿದರೆ ಗುಡಿಸಲೂ
ಬೆಳಕಿನ ಗೋಳ
ಉಳಿವ ಬೂದಿ...!!







ಎಷ್ಟೋ ದಿನಗಳಿಂದ ಕೂಡಿಟ್ಟ
ಕನಸುಗಳ ಲೆಕ್ಕ ಯಾರಿಗಾಗಿ...??
ಒಂದು ದಿನದ ಸಡಗರದಲ್ಲಿ
ಸುಟ್ಟು ಕರಕಲಾಗುವ ದುಡ್ಡು
ಅಜ್ಜ ಹೇಳಿದ್ದ ಮಾತು
ದುಡ್ಡು ಸುಡುವ ಹಬ್ಬವಲ್ಲ ದೀಪಾವಳಿ...!!
ಬದುಕ ಬೆಳಗುವ ಹಬ್ಬ..
ಮಗನ ತಲೆಮಾರಿಗೆ
ಅಜ್ಜನೆಂದರೆ - ಪ್ರಶ್ನಾರ್ಥಕ ಚಿಹ್ನೆ..!
ವೃದ್ಧಾಶ್ರಮದ ಒಣಗಿದ ಎಲೆ...!!



ಕೈ ಚಾಚಿ ಹ್ಮಾಂ ಹಾಗೇ...
ದೂರ ಕೂತು ಹಚ್ಚಿದ್ದು ಪಟಾಕಿ
ದಿಡೀರ್ ಬೆಳಕೇ ಬೇಕು ಎಲ್ಲರಿಗೂ
ಓಡುವ ತಲೆಮಾರು..!!
ಒಂದು ದಿನದ ಬೆಳಕಿಗೆ
ಕಣ್ಣ ದೀಪ ಆರಿ
ಬದುಕೀಗ ಗಾಢಾಂಧಕಾರ..!!


ದೇಹ ದೀಪ ಜ್ವಾಲೆ
ಉರಿವ ಸೂರ್ಯ ಬೆಳಕ ಚೆಲ್ಲುವ
ಸೋಜಿಗದ ಅರಿವು ;
ತಾರಾ ನಿಹಾರಿಕೆಗಳ ಸಿಡಿತ
ಬ್ರಹ್ಮಾಂಡವರಳಿಸಿದ ಬೆಳಕು ;
ಅಂತರಂಗದಲ್ಲಿ ಹಣತೆ ಹಚ್ಚಲು ಮರೆತು
ಕಳೆದಿದ್ದು ಶತಮಾನ... ಸಹಸ್ರಮಾನ...!!

ಹೊಸದಾಗಿ ಅರಳಿದ ಸೂರ್ಯನಿಗೆ
ಸುಟ್ಟ ದೇಹಗಳ ಕರಕಲು ನಾಥ
ಬೀದಿ ತುಂಬ ಹರಡಿಬಿದ್ದ
ದೀಪಾವಳಿಯ ಅವಶೇಷ
ಪೌರ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ
ಮುಗಿದ ದೀಪಾವಳಿ-ದಿವಾಳಿ..!
ಹಚ್ಚಿಟ್ಟ ಹಣತೆ
ಬದುಕಿಗೂ-ಸಾವಿಗೂ ಸೂಚಕ
ಮುಗಿದ ದೀಪಾವಳಿಯ ಸೂತಕ...!!


ದಿನಾಂಕ:06.12.2012ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆಅವಧಿಯಪುಟಗಳಲ್ಲಿ ಓದಲು  ಲಿಂಕ್ ಬಳಸಿ – http://avadhimag.com/?p=70306

4 comments:

  1. ಎಲ್ಲಾ ಕವನಗಳೂ ಸೊಗಸಾಗಿದೆ...

    ReplyDelete
  2. ಎಷ್ಟೋ ದಿನಗಳಿಂದ ಕೂಡಿಟ್ಟ
    ಕನಸುಗಳ ಲೆಕ್ಕ ಯಾರಿಗಾಗಿ...??
    ಒಂದು ದಿನದ ಸಡಗರದಲ್ಲಿ
    ಸುಟ್ಟು ಕರಕಲಾಗುವ ದುಡ್ಡು
    ಅಜ್ಜ ಹೇಳಿದ್ದ ಮಾತು
    ದುಡ್ಡು ಸುಡುವ ಹಬ್ಬವಲ್ಲ ದೀಪಾವಳಿ...!!
    ಬದುಕ ಬೆಳಗುವ ಹಬ್ಬ..
    ಮಗನ ತಲೆಮಾರಿಗೆ
    ಅಜ್ಜನೆಂದರೆ - ಪ್ರಶ್ನಾರ್ಥಕ ಚಿಹ್ನೆ..!
    ವೃದ್ಧಾಶ್ರಮದ ಒಣಗಿದ ಎಲೆ...!!

    ಅದ್ಭುತ ಸಾಲುಗಳು ಭಾಯ್......
    ಧಿಡೀರ್ ಬೆಳಕೇ ಬೇಕು......
    ಒಂದು ದಿನದ ಬೆಳಕಿಗೆ ಕಣ್ಣ ಬೆಳಕು ಆರಿ
    ಗಾಢಾಂಧಕಾರ.....
    ವಾವ್ ..... ಸಕತ್ತಾಗಿದ್ದಪಾ......
    continue young man.....

    ReplyDelete
  3. super.... tumbaa chennagide kavite...

    ReplyDelete

ನಿಮ್ಮ ಅನಿಸಿಕೆ