ದೇವಾಮೃತ ಗಂಗೆ//ರಘುನಂದನ ಕೆ.
ಸುಳಿದಾಡಿ ಈ ಮನಸು
ನೆನಪ ಪುಟ ತಿರುವಲು
ಕಂಡದ್ದು
ಬೆಚ್ಚಗೆ ಮಲಗಿದ್ದ
ನಿನ್ನ ನೆನಪ ನವಿಲುಗರಿ
ಮೌನ ಕೊಲ್ಲುತ್ತ
ಸಾಗರ ತೀರದ ಮರಳಲ್ಲಿ
ಮೂಡಿಸಿದ್ದ
ಜೋಡಿಪಾದಗಳ ಗುರುತ
ನುಂಗಿದ್ದು
ಮರಳೋ, ಅಲೆಯೋ
ಇನ್ನೂ ತಿಳಿಯಲಾಗಿಲ್ಲ...!
ಬದುಕ ಬೆಸೆವ
ಮಾತಾಡಿದವರಿಗೆ
ಬೆಸೆದ ಕೈ ಬೇರೆಯಾದದ್ದು
ಅರಿವಾಗುವ ಮೊದಲೇ
ಸೂರ್ಯ
ಅಸ್ತಮಿಸಿಬಿಟ್ಟಿದ್ದ...
ಮತ್ತದೇ ತೀರದಲ್ಲಿ
ಹೆಜ್ಜೆ ಹುಡುಕಿದರೆ;
ಗೆಜ್ಜೆ ಕಟ್ಟಿದ ಪಾದ
ಎಲ್ಲೋ ಮಾಯ,
ಎಷ್ಟು ಎಣಿಸಿದರೂ
ಲೆಕ್ಕಕ್ಕೆ ಸಿಗುವುದು
ಐದೇ ಬೆರಳು...!!
ನೆನಪ ಹೊತ್ತಿಗೆಯಲ್ಲಿ
ಮುಚ್ಚಿಟ್ಟು
ಮತ್ತದೇ ಸಾಗರ ತೀರಕ್ಕೆ
ಸಾಗುತ್ತೇನೆ ಸದಾ
ಬೆಸೆಯಲಾರದ ಬೆರಳುಗಳ ಹುಡುಕಿ.
ಚಿತ್ರಕೃಪೆ : ಅಂತರ್ಜಾಲ
ದಿನಾಂಕ: 31.01.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ

.jpg)
.jpg)
.jpg)
.jpg)
ಸುಂದರ ಭಾವಗಳ ಗುಚ್ಛ
ReplyDeleteಈ ಕವನ.....
ತುಂಬಾನೇ ಚನ್ನಾಗಿದೆ.......
ಮುಂದುವರೆಯಲಿ ಪಯಣ....
ಅರ್ಥಗರ್ಭಿತ ಗೊಂಚಲು ಕವಿತೆಗಳು ತುಂಬಾ ಚೆನ್ನಾಗಿವೆ. ಕವಿಯ ಭಾವ ಕವಿತೆಗೆ ಜೀವ..
ReplyDelete